Advertisement

ಬಿ ಟೀಂ ಯಾರಾದರೇನು, ಬಿಜೆಪಿ ಎ ಟೀಂ ಎನ್ನುವುದು ಖಾತ್ರಿ ಆಯ್ತು: ಸಿಎಂ ಬೊಮ್ಮಾಯಿ

11:18 AM Jun 11, 2022 | Team Udayavani |

ಬೆಳಗಾವಿ: ಎಚ್.ಡಿ. ಕುಮಾರಸ್ವಾಮಿ ಮತ್ತು‌ ಸಿದ್ದರಾಮಯ್ಯ ಮಧ್ಯೆ ನಾನು ಹೋಗುವುದಿಲ್ಲ. ಭಾರತೀಯ ಜನತಾ ಪಾರ್ಟಿ ಎ ಟೀಂ ಎನ್ನುವುದು ಖಾತ್ರಿಯಾಗಿದೆ. ಬಿ ಟೀಂ ಯಾವುದಾದರೇನು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ನಗರದಲ್ಲಿ ಶನಿವಾರ ಡಾ.‌ಪ್ರಭಾಕರ ಕೋರೆ ಅವರ ನಿವಾಸಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ವ್ಯಖ್ಯಾನ ಬಗ್ಗೆ ನಾನು ಮಾತನಾಡುವುದಿಲ್ಲ. ಕಾಂಗ್ರೆಸ್ ಪಕ್ಷ ಜೆಡಿಎಸ್ ಗೆ, ಜೆಡಿಎಸ್ ಪಕ್ಷ ಕಾಂಗ್ರೆಸ್ ಗೆ ಬಿ ಟೀಂ ಎನ್ನುತ್ತಿದೆ.‌ ಹೀಗಾಗಿ ಎ ಟೀಂ ಎನ್ನುವುದು ಬಿಜೆಪಿ ಪಕ್ಕಾ ಆಗಿದೆ ಎಂದರು.

ನನ್ನ ವಿರುದ್ಧವೇ ಸಿದ್ದರಾಮಯ್ಯ ಹೆಚ್ಚು ಮಾತನಾಡುತ್ತಾರೆ. ಅವರು ಬಳಸುವ ಪದಗಳು ನನ್ನ ಬಗ್ಗೆ ಜಾಸ್ತಿ ಇರುತ್ತದೆ. ಬೆಳಗಾವಿಗೆ ಬಂದಾಗ ನೀವೇ ನೋಡಿದೀರಲ್ಲ ಎಂದರು.

ಇದನ್ನೂ ಓದಿ:ನೂಪುರ್ ಹೇಳಿಕೆ ವಿರೋಧಿಸಿ ಪ್ರತಿಭಟನೆ: ರಾಜ್ಯದೆಲ್ಲೆಡೆ ಖಾಕಿ ಕಣ್ಗಾವಲು

ಬೆಳಗಾವಿಯ ಎಲ್ಲ‌ ಸಾಹುಕಾರರೂ ಒಗ್ಗಟ್ಟಿದ್ದಾರೆ. ಎಲ್ಲರೂ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಎಲ್ ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.‌ಪ್ರಭಾಕರ ಕೋರೆ ಮುನಿಸಿಕೊಂಡಿಲ್ಲ. ಅವರನ್ನು ನಿರ್ಲಕ್ಷಿಸುವ ಮಾತೇ ಇಲ್ಲ. ನಮ್ಮ ಹಿರಿಯರು, ಮಾರ್ಗದರ್ಶಕರು. ಅವರದ್ದೇ ಆದ ಸ್ಥಾನ ಇದೆ. ನಾವು ಅವರನ್ನು ಅಲ್ಲಗಳೆದಿಲ್ಲ. ಪೂರ್ವಭಾವಿಯಾಗಿ ಆರು ತಿಂಗಳ ಮುಂಚೆಯೇ ಅವರು ಡಾಕ್ಟರೇಟ್ ಪಡೆಯಲು ಹೋಗಿದ್ದರು. ನನಗೆ ಹೇಳಿ ಹೋಗಿದ್ದರು. ನಾಲ್ಕು ದಶಕಗಳ ಸುದೀರ್ಘ ಅವಧಿಯಲ್ಲಿ ಸಾರ್ವಜನಿಕ ಸೇವೆಯಲ್ಲಿ ಮಾಡಿರುವ ಸೇವೆಯನ್ನು ಪಕ್ಷ ಹಾಗೂ ನಾವು ಗುರುತಿಸುತ್ತೇವೆ ಎಂದು ಹೇಳಿದರು.

Advertisement

ನಾಲ್ಕೂ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಇಬ್ಬರು ವಾಯವ್ಯ ಕ್ಷೇತ್ರದಲ್ಲಿ ಅರುಣ ಶಹಾಪುರ ಹಾಗೂ ಹನುಮಂತ ನಿರಾಣಿ ಹೆಚ್ಚಿನ ಅಂತರದಿಂದ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next