Advertisement

ಮೀಸಲಾತಿ: ಮೇಲ್ಮನವಿಗೆ ತ.ನಾಡು ನಿರ್ಧಾರ

08:55 PM Nov 10, 2022 | Team Udayavani |

ಚೆನ್ನೈ: ಮೇಲ್ವರ್ಗದಲ್ಲಿರುವ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ(ಇಡಬ್ಲ್ಯುಎಸ್‌) ಶೇ.10 ಮೀಸಲಾತಿ ಕಲ್ಪಿಸುವ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ತಮಿಳುನಾಡಿನ ಡಿಎಂಕೆ ಸರ್ಕಾರ ನಿರ್ಧರಿಸಿದೆ.

Advertisement

ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸೇರಿದಂತೆ ದೇಶದ ಶೇ.82ರಷ್ಟು ಜನಸಂಖ್ಯೆಯ ಸಾಮಾಜಿಕ ನ್ಯಾಯವನ್ನು ರಕ್ಷಿಸುವುದು, ಸಂವಿಧಾನದ ಮೂಲ ಆಶಯವನ್ನು ರಕ್ಷಿಸುವುದು ಮತ್ತು ಮೀಸಲಾತಿಯ ತತ್ವಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈಮುರುಗನ್‌ ಹೇಳಿದ್ದಾರೆ.

ಇದೇ ವೇಳೆ, ಈ ಕುರಿತು ಚರ್ಚಿಸಲು ನ.12ರಂದು ಸರ್ವಪಕ್ಷ ಸಭೆಯನ್ನೂ ತ.ನಾಡು ಸರ್ಕಾರ ಕರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next