Advertisement

ಡಿಕೆಶಿ ಪೇಪರ್‌ ಟೈಗರ್‌: ಶೆಟ್ಟರ್‌

10:46 PM May 12, 2019 | Lakshmi GovindaRaj |

ಹುಬ್ಬಳ್ಳಿ: “ಕನಕಪುರದ ಅಕ್ಕಪಕ್ಕದಲ್ಲೇ ಕಾಂಗ್ರೆಸ್‌ ಗೆಲ್ಲಿಸಲು ಸಾಧ್ಯವಾಗದ ಸಚಿವ ಡಿ.ಕೆ.ಶಿವಕುಮಾರ್‌ ಪೇಪರ್‌ ಟೈಗರ್‌. ಅವರ ಆಟ ಕುಂದಗೋಳದಲ್ಲಿ ನಡೆಯುವುದಿಲ್ಲ’ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, “ಡಿ.ಕೆ.ಶಿವಕುಮಾರ್‌ ಅವರನ್ನು ಅನಗತ್ಯವಾಗಿ ವಿಜೃಂಭಿಸಲಾಗುತ್ತಿದೆ. ಅವರೊಬ್ಬ ಪೇಪರ್‌ ಟೈಗರ್‌ ಎಂಬುದು ಉಪ ಚುನಾವಣೆ ಫ‌ಲಿತಾಂಶದ ನಂತರ ಸಾಬೀತಾಗಲಿದೆ. ಮೇ 23ರ ನಂತರ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಂತರಿಕ ಕಚ್ಚಾಟದಿಂದ ಪತನಗೊಳ್ಳುವುದು ಖಚಿತ. ನಾವೇನು ಆಪರೇಶನ್‌ ಕಮಲ ಮಾಡಬೇಕಿಲ್ಲ.

ಮಾಜಿ ಸಿಎಂ ಸಿದ್ದರಾಮಯ್ಯ ಇನ್ನಿತರರು ಸೇರಿ ಸಮ್ಮಿಶ್ರ ಸರ್ಕಾರ ಕೆಡವುತ್ತಾರೆ. ಯಾವುದೇ ಕಾಂಗ್ರೆಸ್‌-ಜೆಡಿಎಸ್‌ ಶಾಸಕರನ್ನು ನಾವು ಸಂಪರ್ಕ ಮಾಡುತ್ತಿಲ್ಲ. ಅವರಾಗಿಯೇ ಅಸಮಾಧಾನಗೊಂಡು ಬಂದರೆ ನಾವೇನು ಮಾಡಲಾಗುತ್ತದೆ. ಕುಂದಗೋಳ ಹಾಗೂ ಚಿಂಚೋಳಿಯಲ್ಲಿ ಬಿಜೆಪಿ ಗೆಲುವು ಖಚಿತ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next