Advertisement

ಹಲ್ಲೆ ಪ್ರಕರಣ ನಡೆದೇ ಇಲ್ಲ: ನಲಪಾಡ್ ಪರ ಡಿಕೆಶಿ ಬ್ಯಾಟಿಂಗ್

05:19 PM Jan 20, 2022 | Team Udayavani |

ಬೆಂಗಳೂರು : ಯುವ ಕಾಂಗ್ರೆಸ್ ಮುಖಂಡ ನಲಪಾಡ್ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬ್ಯಾಟ್ ಬೀಸಿದ್ದು, ಅಂಥ ಘಟನೆ ನಡೆದೇ ಇಲ್ಲ ಎಂದು ಹೇಳಿದ್ದಾರೆ.

Advertisement

ನಲಪಾಡ್ ವಿರುದ್ಧ ಹಲ್ಲೆ ಆರೋಪ ವಿಚಾರ ಸಂಬಂಧ ಸುದ್ದಿಗಾರರ ಜತೆ ಮಾತನಾಡಿದ ಶಿವಕುಮಾರ್, ಯಾವ ಗಲಾಟೆನೂ ಇಲ್ಲ, ಏನು ಇಲ್ಲ .ನಾನು ಕ್ರಾಸ್ ಚೆಕ್ ಮಾಡಿದೆ, ಆ ಥರ ಏನೂ ಇಲ್ಲ ಎಂದು ಹೇಳಿದರು.

ಯಾರೋ ಮಿಸ್ ಗೈಡ್ ಮಾಡಿದ್ದಾರೆ .ನಾನು ಸಿದ್ದು ಹಳ್ಳೇಗೌಡ ಜೊತೆ ಪೋನಲ್ಲಿ ಮಾತನಾಡಿದೆ . ನನ್ನ ಪೋನ್ ತಗೊಂಡು ಯಾರೋ ಈ ರೀತಿ ಮಾಡಿದ್ದಾರೆ ಅಂತ ಅವರು ಹೇಳಿದ್ದಾರೆ ಎಂದು ಶಿವಕುಮಾರ್ ಸ್ಪಷ್ಟನೆ ನೀಡಿದರು.

ಕೆಲಸ ಮಾಡ್ತಾ ಇದ್ದಾರೆ ಅಂದ್ರೆ ಅವರ ವಿರುದ್ಧ ಈ ರೀತಿ ಏನೋ ಒಂದ್ ಕೇಳಿ ಬರ್ತಾಯಿರುತ್ತೆ. ನಾನು ಯಾರ ಪರ್ಸನಲ್ ಲೈಫ್ ಗೆ ಎಂಟ್ರಿ ಕೊಡುವುದಕ್ಕೆ ಆಗುವುದಿಲ್ಲ.ಯಾರೇ ಪಕ್ಷದಲ್ಲಿ ತಪ್ಪು ಮಾಡಿದ್ರೆ ಶಿಸ್ತಿನ ಕ್ರಮ ತೆಗೆದುಕೊಳ್ತೀವಿ ಎಂದು ಹೇಳಿದರು.

ರಾಜ್ಯ ಸರಕಾರಕ್ಕೆ ಕೋವಿಡ್ ವಿಚಾರದಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಾಧ್ಯ ವಾಗುತ್ತಿಲ್ಲ. ಸರಕಾರ ಜನರನ್ನು ಸಾಯಿಸುತ್ತಿದೆ ಎಂದು ಆರೋಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next