Advertisement

Ramanagara; ಕುಮಾರಸ್ವಾಮಿ ರೀಲ್ ಬಿಡ್ತಾವ್ನೆ..: ಎಚ್ ಡಿಕೆ ವಿರುದ್ಧ ಡಿ.ಕೆ ಸುರೇಶ್ ಕಿಡಿ

03:50 PM Feb 25, 2024 | Team Udayavani |

ರಾಮನಗರ: ಕುಮಾರಸ್ವಾಮಿ ರೀಲ್ ಬಿಡ್ತಾವ್ನೆ. ನಾನು ಕಲ್ಲು ಹೊಡಿತಿದ್ನೋ, ಅವನು ಕಸ ಹೊಡಿತಿದ್ನೋ ಮುಂದೆ ಮಾತನಾಡುತ್ತೇನೆ. ಅವನು ಡಬ್ಬಾ ಮಾಡಿಕೊಂಡು ನಮ್ಮತ್ರ ಬರುವವನು, ನಾವು ರೀಲ್ ಬಿಟ್ಟು ಬಂದಿರುವವರು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ಸಂಸದ ಡಿ.ಕೆ.ಸುರೇಶ್ ಟಾಂಗ್ ನೀಡಿದರು.

Advertisement

ಗೃಹಲಕ್ಷ್ಮೀ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶಕ್ಕೆ ಮೋದಿ ಗ್ಯಾರಂಟಿ ಎನ್ನುತ್ತಾರೆ, ಆದರೆ ಬೆಂಗಳೂರು ಗ್ರಾಮಾಂತರಕ್ಕೆ ಡಿ.ಕೆ.ಸುರೇಶ್ ಗ್ಯಾರಂಟಿ. ನಾವು ನಮ್ಮ ಅನುದಾನ ಕೇಳಿದರೆ ಜನಸಂಖ್ಯೆ ಕಡಿಮೆ ಎನ್ನುತ್ತಾರೆ. ನಾವು ಮಕ್ಕಳು ಕಡಿಮೆ‌ ಮಾಡಿಕೊಂಡಿದ್ದೆ ತಪ್ಪಾ? ನಾವು ಜನಸಂಖ್ಯೆ ನಿಯಂತ್ರಣ ಮಾಡಿದ್ದೆ ತಪ್ಪಾ? ಉತ್ತರ ಪ್ರದೇಶದಲ್ಲಿ ಹೆಚ್ಚು ಮಕ್ಕಳು ಮಾಡಿದ್ದಾರೆಂದು ನಮ್ಮ ದುಡ್ಡನ್ನು ಅಲ್ಲಿಗೆ ಕೊಡುತ್ತೀರಾ? ಇದರ ವಿರುದ್ಧ ರಾಜ್ಯದ ಜನ ಧ್ವನಿ ಎತ್ತಬೇಕು. ನಮ್ಮ ಜನ ಉತ್ತರ ಪ್ರದೇಶಕ್ಕೆ, ಗುಜರಾತ್, ರಾಜಸ್ಥಾನಕ್ಕೆ ಹೋದರೆ ಕೆಲಸ ಕೊಡುತ್ತಾರಾ, ಕನ್ನಡಿಗರಿಗೆ ಕರ್ನಾಟಕ ಒಂದೇ. ಹಾಗಾಗಿ ನಮ್ಮ ನಾಡನ್ನು ನಾವು ಉಳಿಸಿಕೊಳ್ಳಬೇಕು ಎಂದರು.

ಇವತ್ತು ಬಿಜೆಪಿಯವರು ನನ್ನನ್ನು ರಾಷ್ಟ್ರದ್ರೋಹಿ ಎಂದರು. ನನ್ನನ್ನು ಗುಂಡಿಕ್ಕಿ ಕೊಲ್ಲಿ ಎಂದರು. ನಾನು ನನ್ನ ಸ್ವಂತಕ್ಕೆ ಏನನ್ನು ಕೇಳಲಿಲ್ಲ. ಕರ್ನಾಟಕದ ರೈತರಿಗೆ, ಮಹಿಳೆಯರಿಗೆ, ಜನರ ಹಣವನ್ನು ಕೇಳಿದ್ದೇನೆ. ವರ್ಷಕ್ಕೆ ಪ್ರತಿಯೊಂದು ಕುಟುಂಬ 13ಸಾವಿರ ತೆರಿಗೆ ಕಟ್ಟುತ್ತಿದೆ. ಆದರೂ ನಮಗೆ ಸಿಗಬೇಕಾದ ಅನುದಾನ ಸಿಗುತ್ತಿಲ್ಲ. ನಮ್ಮ 4 ಲಕ್ಷದ 30 ಸಾವಿರ ಕೋಟಿ ಹಣ ತರಿಗೆ ನಮಗೆ ಬರಬೇಕು. ಆದರೆ ಬಿಜೆಪಿ ಸರ್ಕಾರ ಅನ್ಯಾಯ ಮಾಡುತ್ತಿದೆ. ಆ ದುಡ್ಡನ್ನು ನಮಗೆ ಕೊಡಿ ಎಂದರೆ ಈಶ್ವರಪ್ಪ ಗುಂಡಿಕ್ಕಿ ಕೊಲ್ಲಿ ಎನ್ನುತ್ತಾರೆ. ಅವರು ಬೆಂಗಳೂರು ಕಡೆಗೆ ಬರಲಿ ನಾನೇ ಅವರನ್ನ ಭೇಟಿಯಾಗುತ್ತೇನೆ. ಕನ್ನಡಿಗರಿಗೋಸ್ಕರ ನನ್ನ ದೇಹವನ್ನೇ ಕೊಡುತ್ತೇನೆ. ಕುಮಾರಸ್ವಾಮಿ ಕೂಡಾ ಬಿಜೆಪಿ ಜೊತೆ ಸೇರಿಕೊಂಡು ವಕಾಲತ್ತು ಹಾಕುತ್ತಾನೆ ಎಂದರು.

ಬಿಡದಿಗೆ ಶೀಘ್ರದಲ್ಲೇ ಮೆಟ್ರೋ ಬರಲಿದೆ. ಬಿಡದಿಗೆ ಮೆಟ್ರೋ ತರುವುದಕ್ಕೆ ಈಗಾಗಲೇ ಟೆಂಡರ್ ಕರೆದಿದ್ದಾರೆ. ನೀವೆಲ್ಲಾ ಗ್ರೇಟರ್ ಬೆಂಗಳೂರಿನ ಒಂದು ಭಾಗ. ಹಾಗಾಗಿ ಬೆಂಗಳೂರು ಮಾದರಿಯಲ್ಲಿ ಈ ಭಾಗವನ್ನು ಅಭಿವೃದ್ಧಿ ಮಾಡುತ್ತಾರೆ ಎಂದು ಡಿಕೆ ಸುರೇಶ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next