Advertisement

ದ.ಕ.: ಮಳೆಗೆ ಕೊನೆಗೂ ಬಿಡುವು; ಇಂದು ಎಲ್ಲೋ ಅಲರ್ಟ್‌

12:18 AM May 21, 2022 | Team Udayavani |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕಳೆದೆರಡು ದಿನ ಗಳಿಂದ ನಿರಂತರ ಸುರಿದ ಮಳೆ ಶುಕ್ರವಾರ ಮಧ್ಯಾಹ್ನದ ಅನಂತರ ಇಳಿಕೆ ಕಂಡಿತು.

Advertisement

ಬೆಳಗ್ಗೆ ತುಂತುರು ಮಳೆಯಾಗಿದ್ದು ಮಧ್ಯಾಹ್ನದ ವೇಳೆ ಒಂದಷ್ಟು ತೀವ್ರತೆ ಹೆಚ್ಚಿಸಿಕೊಂಡಿತಾದರೂ ಮಧ್ಯಾಹ್ನದ ಬಳಿಕ ಬಿಸಿಲು ಕಾಣಿಸಿಕೊಂಡಿತು. ಗ್ರಾಮೀಣ ಭಾಗದಲ್ಲಿ ಮುಂಜಾನೆ ವೇಳೆ ಉತ್ತಮ ಮಳೆಯಾಗಿ ಬಳಿಕ ಕಡಿಮೆ ಯಾಗಿದೆ. ಬೆಳ್ತಂಗಡಿ ಪರಿಸರದಲ್ಲಿ ಉತ್ತಮ ಮಳೆಯಾಗಿದೆ.

21: ಎಲ್ಲೋ ಅಲರ್ಟ್‌
ಕರಾವಳಿಗೆ ಶನಿವಾರ ಎಲ್ಲೋ ಅಲರ್ಟ್‌ ಇದ್ದು, ಮಳೆ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಉಡುಪಿ: ಉತ್ತಮ ಮಳೆ
ಉಡುಪಿ: ಜಿಲ್ಲೆಯಾದ್ಯಂತ ಶುಕ್ರವಾರವೂ ಉತ್ತಮ ಮಳೆ ಸುರಿದಿದೆ. ಉಡುಪಿ, ಮಣಿಪಾಲ, ಮಲ್ಪೆ, ಹಿರಿಯಡ್ಕ, ಕಾರ್ಕಳ, ನಿಟ್ಟೆ,ಕುಂದಾಪುರ, ಬ್ರಹ್ಮಾವರ, ಬಾರ್ಕೂರು, ಹಾಲಾಡಿ, ಕಾಪು, ಪಡುಬಿದ್ರಿ, ಬೈಂದೂರು ಭಾಗಗಳಲ್ಲಿ ಉತ್ತಮ ಮಳೆಯಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next