Advertisement

ವಿಭಜನೆ ಬಳಿಕ ಮೊದಲ ಬಾರಿಗೆ ಶಾರದಾ ಪೀಠದಲ್ಲಿ ದೀಪಾವಳಿ!

10:33 PM Oct 25, 2022 | Team Udayavani |

ಟೀಟ್ವಾಲ್‌:ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆಯ ಸಮೀಪದಲ್ಲಿ ಮರುನಿರ್ಮಾಣಗೊಳ್ಳುತ್ತಿರುವ ಮಾತಾ ಶಾರದಾ ದೇವಿ ದೇವಾಲಯದಲ್ಲಿ ಇದೇ ಮೊದಲ ಬಾರಿಗೆ ದೀಪಾವಳಿ ಹಬ್ಬವನ್ನು ಆಚರಿಸಲಾಗಿದೆ. ಟೀಟ್ವಾಲ್‌ನಲ್ಲಿ ನೂರಾರು ಮಂದಿ ಶಾರದೆಯ ದೇಗುಲಕ್ಕೆ ಬಂದು ಹಣತೆಗಳನ್ನು ಹಚ್ಚಿ ಹಬ್ಬವನ್ನು ಸಂಭ್ರಮಿಸಿದ್ದಾರೆ.

Advertisement

ಟೀಟ್ವಾಲ್‌ ಗ್ರಾಮವು ಕುಪ್ವಾರ ಜಿಲ್ಲೆಯಲ್ಲಿದ್ದು, ಅಲ್ಲಿಂದ 40 ಕಿ.ಮೀ. ದೂರದಲ್ಲಿ ಶಾರದಾ ಪೀಠವಿದೆ. ನೀಲಮ್‌ ನದಿಯ ತೀರದಲ್ಲಿರುವ ದೇವಾಲಯವಿದು. ದೇಶ ವಿಭಜನೆಯ ಬಳಿಕ ಇದೇ ಮೊದಲ ಬಾರಿಗೆ ಸೋಮವಾರ ಶಾರದಾ ಪೀಠದಲ್ಲಿ ಮೇಣದ ಬತ್ತಿಗಳು, ಹಣತೆಗಳು ಬೆಳಗಿವೆ.

ಭಾರತೀಯ ಯೋಧರು, ಸ್ಥಳೀಯರು ಸೇರಿದಂತೆ ನೂರಾರು ಮಂದಿ ಆಗಮಿಸಿ ದೀಪ ಹಚ್ಚಿ, ಸಿಹಿ ವಿನಿಮಯ ಮಾಡಿಕೊಂಡರು ಎಂದು ಸೇವ್‌ ಶಾರದಾ ಕಮಿಟಿ ಅಧ್ಯಕ್ಷ ರವೀಂದರ್‌ ಪಂಡಿತ ಹೇಳಿದ್ದಾರೆ.

ದೇಗುಲ ನಿರ್ಮಾಣ ಸಮಿತಿ ಸದಸ್ಯ ಅಜಾಝ್ ಖಾನ್‌ ಅವರ ನೇತೃತ್ವದಲ್ಲಿ ಮೊದಲ ಬಾರಿಗೆ ಇಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತು ಎಂದೂ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next