Advertisement
ಕಳೆದ ಕೆಲವು ವರ್ಷಗಳಿಂದ ಬೀಜಾಡಿಯಲ್ಲಿ ಗೋಶಾಲೆ ಆರಂಭಿಸಿ, ಆ ಮೂಲಕ ಗೋವಿನ ಮಹತ್ವ ಎತ್ತಿಹಿಡಿದಿರುವ ತಯಾರಕರು ಗೋಮಯ, ತುಪ್ಪ, ಹಾಲು, ಮೊಸರು, ಅರಶಿನದೊಡನೆ ಜೇಡಿಮಣ್ಣು ಸೇರಿಸಿ ದೀಪಾವಳಿಗೆ ವಿಶೇಷ ದೀಪ ತಯಾರು ಮಾಡಿದ್ದಾರೆ. ದೀಪದ ಬಳಕೆಯ ಅನಂತರ ಬೂದಿಯನ್ನು ಗೊಬ್ಬರವಾಗಿ ಕೂಡ ಉಪಯೋಗಿಸಬಹುದಾಗಿದೆ. ಪಂಚಗವ್ಯ ಗೋಮಯ ದೀಪಗಳು ದೇಸಿ ತುಪ್ಪ ಬಳಕೆಯಿಂದ ತಯಾರಿಸಲಾದ ಹಣತೆಗಳು ಪರಿಸರ ಮಾಲಿನ್ಯವಾಗದಂತೆ ನೋಡಿಕೊಳ್ಳುತ್ತದೆ.
ಪಂಚಗವ್ಯ ಗೋದೀಪ ವ್ಯಾವಹಾರಿಕ ದೃಷ್ಟಿಯಿಂದ ಮಾಡಲಾಗಿಲ್ಲ. ಬದಲಾಗಿ ಗೋಮಾತೆ, ಗೋಶಾಲೆಯ ಪ್ರಾಮುಖ್ಯತೆ ತಿಳಿಹೇಳಲು, ಸ್ವದೇಶಿ ಕಲ್ಪನೆಯ ಅಂಗವಾಗಿ ತಯಾರು ಮಾಡಲಾಗುತ್ತಿದೆ. ಒಂದು ಪ್ಯಾಕೇಟ್ನಲ್ಲಿ 12 ಹಣತೆಗಳನ್ನು ಜೋಡಿಸಲಾಗಿದೆ.
-ಕುಮಾರ್ ಕಾಂಚನ್ಸಂಚಾಲಕರು, ಕಪಿಲೆ ಗೋಸಮೃದ್ಧಿ ಟ್ರಸ್ಟ್ ಬೀಜಾಡಿ