Advertisement

ಮಾದಪ್ಪನ ಸನ್ನಿಧಿಯಲ್ಲಿ ದೀಪಾವಳಿ ಜಾತ್ರೆ ಸಂಭ್ರಮ

12:19 PM Nov 04, 2021 | Team Udayavani |

ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಎಣ್ಣೆಮಜ್ಜನ ಸೇವೆ ಬೇಡಗಂಪಣ ಅರ್ಚಕರಿಂದ ನೆರವೇರಿತು. ಬೆಟ್ಟದಲ್ಲಿ ಬುಧವಾರದಿಂದ ಸರಳ, ಸಂಪ್ರದಾಯಕ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದ್ದು, ಮೊದಲ ದಿನ ಮಲೆ ಮಾದಪ್ಪನಿಗೆ ಎಳ್ಳುಕುಟ್ಟಿದ ಎಣ್ಣೆಯಿಂದ ಮಜ್ಜನ ಸೇವೆ ನೆರವೇರಿಸಲಾಯಿತು. ಇದೇ ವೇಳೆ ಮಾದಪ್ಪನಿಗೆ ಬಿಲ್ವಾರ್ಚನೆ, ಸಹಸ್ರ ನಾಮಾವಳಿ ಸೇರಿದಂತೆ ಹಲವು ಸೇವೆಗಳನ್ನು ನಡೆಸಲಾಯಿತು.

Advertisement

ಅಲಂಕೃತಗೊಂಡ ಶ್ರೀ ಕ್ಷೇತ್ರ: ದೀಪಾವಳಿ ಜಾತ್ರಾ ಮಹೋತ್ಸವ ಹಿನ್ನೆಲೆ ಶ್ರೀ ಕ್ಷೇತ್ರ ಮತ್ತು ದೇವಾಲಯವನ್ನು ವಿವಿಧ ವರ್ಣಗಳ ಪುಷ್ಪಾಲಂಕಾರ ಮತ್ತು ವಿದ್ಯುದ್ದೀಪಾಲಂಕಾರದಿಂದ ಕಂಗಳಿಸುವಂತೆ ಮಾಡಲಾಗಿದೆ. ಮಲೆ ಮಾದಪ್ಪನ ಸನ್ನಿಧಿಯ ಗರ್ಭಗುಡಿ, ಗರ್ಭಾಗಂಣ, ಪ್ರವೇಶ ದ್ವಾರವನ್ನು ಬಗೆಬಗೆಯ ವಿವಿಧ ವರ್ಣಗಳ ಪುಷ್ಪಗಳಿಂದ ಸಿಂಗರಿಸಲಾಗಿದೆ. ದೇವಾಲಯದ ಗರ್ಭಗುಡಿಯ ಗೋಪುರ, ರಾಜಗೋಪುರ, ದೇವಾಲಯದ ಮುಖ್ಯರಸ್ತೆಯನ್ನು ವಿದ್ಯುತ್‌ ದೀಪಗಳಿಂದ ಅಲಂಕಾರಗಳಿಸಲಾಗಿದೆ.

ಇದನ್ನೂ ಓದಿ:- ಹುಲಿ ದಾಳಿಗೆ ಮೂರು ಹಸು, ಒಂದು ಕುರಿ ಸಾವು

ಇಂದು ಹಾಲರವೆ ಉತ್ಸವ: ದೀಪಾವಳಿ ಜಾತ್ರೆಯ ಮತ್ತೂಂದು ವಿಶೇಷವಾದ ಕಾಲರವೆ ಉತ್ಸವ ಗುರುವಾರ ಜರುಗಲಿದೆ. ಬೇಡಗಂಪಣ ಕುಲದ 108 ಹೆಣ್ಣುಮಕ್ಕಳು ದಟ್ಟಡವಿಯ ಮಧ್ಯಭಾಗದ ಕಾರಯ್ಯ ಮತ್ತು ಬಿಲ್ಲಯ್ಯನ ಮಡುವನ್ನು ತಲುಪಿ ಪುಣ್ಯಸ್ನಾನ ಮಾಡಿ ವಿಧಿವಿಧಾನಳೊಂದಿಗೆ ಪಜಾ ಕೈಂಕರ್ಯ ನೆರವೇರಿಸಿ ಹಾಲರವೆ ಉತ್ಸವ ನೆರವೇರಿಸಲಿದ್ದಾರೆ.

Advertisement

ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳಿಗೆ ನಿಷಿದ್ಧ

ಮಲೆ ಮಹದೇಶ್ವರ ಬೆಟ್ಟದಲ್ಲಿ ಕೋವಿಡ್‌ ನಿಯಮಾವಳಿ ಹಿನ್ನೆಲೆ ಈ ಬಾರಿ ಎಣ್ಣೆಮಜ್ಜನ ಸೇವೆಗೆ ಸ್ಥಳೀಯ ಭಕ್ತಾದಿಗಳನ್ನು ಹೊರತುಪಡಿಸಿ ಹೊರಗಿನ ಭಕ್ತಾದಿಗಳಿಗೆ ನಿರ್ಬಂಧ ಹೇರಲಾಗಿದೆ. ಜಿಲ್ಲಾಡಳಿತದ ನಿರ್ಬಂಧದ ಹಿನ್ನೆಲೆ ಎಣ್ಣೆಮಜ್ಜನ ಸೇವೆ ಹಾಗೂ ಹಾಲರವೆ ಉತ್ಸವದಲ್ಲಿ ಸ್ಥಳೀಯ ಭಕ್ತಾದಿಗಳ ಮಾತ್ರ ಅವಕಾಶ ನೀಡಿದ್ದು, ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದ ಹೊರ ಊರಿನ ಭಕ್ತಾದಿಗಳನ್ನು ಹನೂರು ಮತ್ತು ತಾಳಬೆಟ್ಟ ಚೆಕ್‌ ಪೋಸ್ಟ್‌ಗಳ ಬಳಿಯೇ ತಡೆಯಲಾಗುತಿತ್ತು.

ಪ್ರಾಧಿಕಾರದಿಂದ ಸಕಲ ವ್ಯವಸ್ಥೆ

ದೀಪಾವಳಿ ಜಾತ್ರಾ ಮಹೋತ್ಸವದ ಹಿನ್ನೆಲೆ ಕ್ಷೇತ್ರಕ್ಕೆ ಪಾದಯಾತ್ರೆಯಲ್ಲಿ ಆಗಮಿಸುವ ಭಕ್ತಾದಿಗಳಿಗೆ ಕೌದಳ್ಳಿಯಿಂದ ಶ್ರೀಕ್ಷೇತ್ರದವರೆಗೆ 10 ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ರಾಜಗೋಪುರದ ಮುಂಭಾಗ ಎಡ ಮತ್ತು ಬಲಭಾಗದ ಮೈದಾನದಲ್ಲಿ ಶಾಮಿಯಾನ ಹಾಕಿ ನೆರಳಿವ ವ್ಯವಸ್ಥೆ ಕಲ್ಪಿಸಲಾಗಿದೆ.

ಅಂತರಗಂಗೆ ಸಮೀಪ ಏಕಕಾಲದಲ್ಲಿ 400 ಭಕ್ತಾದಿಗಳು ಸ್ನಾನ ಮಾಡುವ ರೀತಿಯಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಷವರ್‌ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ದ್ವಿಚಕ್ರ ವಾಹನಗಳಿಗೆ, ಕಾರು, ಜೀಪು, ಕರಾರಸಾಸಂ ಮತ್ತು ತಮಿಳುನಾಡು ಸಾರಿಗೆ ಬಸ್ಸುಗಳ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next