Advertisement

ಸರಕಾರಿ ನೌಕರರಿಗೆ ದೀಪಾವಳಿ ಕೊಡುಗೆ

12:48 AM Oct 18, 2019 | mahesh |

ಬೆಂಗಳೂರು: ರಾಜ್ಯ ಸರಕಾರಿ ನೌಕರರಿಗೆ ಬಿಜೆಪಿ ಸರಕಾರ ದೀಪಾವಳಿ ಕೊಡುಗೆ ನೀಡಲು ಮುಂದಾಗಿದೆ. ಸರಕಾರಿ ನೌಕರರ ಮೂಲ ವೇತನಕ್ಕೆ ಶೇ.4.75ರಷ್ಟು ತುಟ್ಟಿ ಭತ್ತೆ ಹೆಚ್ಚಳ ಮಾಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಒಪ್ಪಿಗೆ ನೀಡಿದ್ದು, ಒಂದೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆ ಇದೆ.

Advertisement

ಇತ್ತೀಚೆಗೆ ಕೇಂದ್ರ ಸರಕಾರ ತನ್ನ ನೌಕರರಿಗೆ ಮೂಲ ವೇತನಕ್ಕೆ ಶೇ. 5 ತುಟ್ಟಿ ಭತ್ತೆ ಹೆಚ್ಚಳ ಮಾಡಿತ್ತು. ರಾಜ್ಯ ಸರಕಾರವೂ ಅದರ ಆಧಾರ ದಲ್ಲಿಯೇ ರಾಜ್ಯ ಸರಕಾರಿ ನೌಕರರ ತುಟ್ಟಿ ಭತ್ತೆ ಹೆಚ್ಚಳ ಮಾಡಲಿದ್ದು, 6ನೇ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರಕಾರಿ ನೌಕರರ ತುಟ್ಟಿ ಭತ್ತೆ ಹೆಚ್ಚಳವಾಗಲಿದೆ. ಪ್ರಸಕ್ತ ವರ್ಷ ಶೇ. 4.75 ತುಟ್ಟಿ ಭತ್ತೆ ಹೆಚ್ಚಳ ಮಾಡಲು ಮುಖ್ಯ ಮಂತ್ರಿ ಯಡಿಯೂರಪ್ಪ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯ ಸರಕಾರಿ ನೌಕರರಿಗೆ ಸದ್ಯ ಶೇ. 6.50ರಷ್ಟು ತುಟ್ಟಿ ಭತ್ತೆ ಇದೆ. ಹೊಸದಾಗಿ ಶೇ. 4.75ರಷ್ಟು ಹೆಚ್ಚಳವಾದರೆ ಒಟ್ಟಾರೆ ಶೇ. 11.25ರಷ್ಟು ತುಟ್ಟಿ ಭತ್ತೆ ನೀಡಿದಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next