Advertisement

ರೈತರೊಂದಿಗೆ ಸಂವಾದ ನಡೆಸಿ ಕಾಯ್ದೆ ಜಾರಿಗೊಳಿಸಿ

01:48 PM Mar 01, 2021 | Team Udayavani |

ಚಿಕ್ಕಬಳ್ಳಾಪುರ: ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಯಾವುದೇ ಸಮಸ್ಯೆಗಳುಇದ್ದರೂ ಸಹ ಅದನ್ನು ಸಂವಾದದ ಮೂಲಕ ಬಗೆಹರಿಸಬಹುದಾಗಿದೆ. ಲಾಠಿ ಪ್ರಹಾರಮತ್ತು ಫೈರಿಂಗ್‌ ಮಾಡುವುದರಿಂದ ಸಮಸ್ಯೆಗಳು ಪರಿಹಾರ ಆಗುವುದಿಲ್ಲ. ಸಂವಾದ ಮಾಡದೆ ಕೃಷಿ ಕಾಯ್ದೆ ಜಾರಿಗೊಳಿಸಿದ್ದರಿಂದ ರೈತರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ ಎಂದು 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಕೆ.ಅಮರನಾರಾಯಣ್‌ ತಿಳಿಸಿದರು.

Advertisement

8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಅಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಸ್ಯೆ ಎಷ್ಟೇ ತೀವ್ರತೆಯಾಗಿದ್ದರೂ ಸಹ ಇತ್ಯರ್ಥ ಮಾಡಬಹುದು. ಅದಕ್ಕಾಗಿ ಸಂವಾದ ಬಹಳ ಮುಖ್ಯವಾಗಿರುತ್ತದೆ ಎಂದರು.

ಸಹಮತ: ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿ ಸಂವಾದಕ್ಕಿದ್ದು, ಹಾವೇರಿಯಲ್ಲಿರಸಗೊಬ್ಬರಕ್ಕಾಗಿ ಹೋರಾಟ ನಡೆಸಿದ ರೈತರ ಮೇಲೆ ಗುಂಡಿನ ದಾಳಿಯಾದರೆ ಅಂದು ದಾವಣಗೆರೆಯಲ್ಲಿ ಪೊಲೀಸ್‌ವರಿಷ್ಠಾಧಿಕಾರಿಗಳೊಂದಿಗೆ ಮಾಡಿದ ಮನವಿಗೆ ರೈತರು ಸಹಮತ ವ್ಯಕ್ತಪಡಿಸಿವಾಪಸ್‌ ತೆರಳಿದರು ಎಂದು ಬೆಳಕಿಗೆ ಚೆಲ್ಲಿದರು.

ದೆಹಲಿ ಘಟನೆ ನಡೆಯುತ್ತಿರಲಿಲ್ಲ: ರೈತರ ಅಭಿವೃದ್ಧಿಗೆಂದು ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿಲಾಗಿದೆಎನ್ನುತ್ತಾರೆ. ಆದರೆ ರೈತರು ಇದರ ವಿರುದ್ಧಸತತವಾಗಿ ಬೀದಿಗಿಳಿದು ಹೋರಾಟನಡೆಸುತ್ತಿದ್ದಾರೆ. ಜಾರಿಗೊಳಿಸುವ ಮುನ್ನ ರೈತರೊಂದಿಗೆ ಸಂವಾದ ನಡೆಸಿದರೆ ಬಹುಶಃದೆಹಲಿಯ ಘಟನೆ ನಡೆಯುತ್ತಿರಲಿಲ್ಲಎಂದರು.

ಸಿಲಿಕಾನ್‌ ಸಿಟಿ ಎಂದು ಖ್ಯಾತಿ ಹೊಂದಿರುವ ಬೆಂಗಳೂರು ನಗರ ಪ್ರದೇಶದಲ್ಲಿ ಕಾಂಕ್ರೀಟ್‌ ರಸ್ತೆಗಳನ್ನು ನಿರ್ಮಾಣ ಮಾಡುವತೆಪದಲ್ಲಿ ಗಿಡಮರಗಳನ್ನು ಕಟಾವುಮಾಡುತ್ತಿದ್ದು, ಇದರ ಪರಿಣಾಮವನ್ನುಬೆಂಗಳೂರಿಗರು ಎದುರಿಸುವ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದರು.

Advertisement

ಗಂಡಾಂತರ: ಕಾವೇರಿ ಕಣಿವೆಯಲ್ಲಿ ನೀರು ಇಲ್ಲದಿದ್ದರೆ ಬೆಂಗಳೂರಿನ ನಿವಾಸಿಗಳು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣ ವಾಗಲಿದೆ. ಪರಿಸರ ನಾಶದಿಂದ ಆಗುತ್ತಿರುವದುಷ್ಪರಿಣಾಮಗಳ ಕುರಿತು ಈಗಾಗಲೇವಿಜ್ಞಾನಿಗಳು ಎಚ್ಚರಿಸಿದ್ದು, ಮುಂದಿನದಿನಗಳಲ್ಲಿ ಬೆಂಗಳೂರಿಗೆ ಗಂಡಾಂತರ ಕಾದಿದೆ ಎಂದು ಪುನರುಚ್ಚರಿಸಿದರು.

ಈ ಸಂದರ್ಭದಲ್ಲಿ ಶಾಂತ ವಿದ್ಯಾ ಸಂಸ್ಥೆಮುಖ್ಯ ಆಡಳಿತಾಧಿಕಾರಿ ಡಾ.ಕೋಡಿರಂಗಪ್ಪ, ಹಿರಿಯ ಸಾಹಿತಿ ಎನ್‌.ಸಂಜೀವಪ್ಪ, ಜಿಲ್ಲಾ ಕಸಪ ಅಧ್ಯಕ್ಷ ಡಾ.ಕೈವಾರ ಶ್ರೀನಿವಾಸ್‌ ಉಪಸ್ಥಿತರಿದ್ದರು.

ಸಮಸ್ಯೆ ಇತ್ಯರ್ಥಕ್ಕೆ ಸಕಾರಾತ್ಮಕ ಸ್ಪಂದನೆ ಅಗತ್ಯ :

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆಯಿಂದ ಜನವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಬಗೆಹರಿಸಲು ಸಕಾರಾತ್ಮಕವಾಗಿ ಸ್ಪಂದಿಸಬೇಕಾಗಿದೆ ಎಂದು ಸಮ್ಮೇಳನಾಧ್ಯಕ್ಷ ಕೆ. ಅಮರನಾರಾಯಣ ಅಭಿಪ್ರಾಯಪಟ್ಟರು. ಜಿಲ್ಲೆಯಲ್ಲಿ ಪ್ರತಿಯೊಬ್ಬರು ಗಿಡಮರಗಳನ್ನು ಬೆಳೆಸಿ ಕೋಟಿನಾಟಿ ಅಭಿಯಾನ ಯಶಸ್ವಿಗೊಳಿಸಿ ಕೋಟಿ ಗಿಡಗಳನ್ನು ನಾಟಿ ಮಾಡಿ ಪೋಷಣೆ ಮಾಡಿದರೆ ಮುಂದಿನ 10 ವರ್ಷಗಳಲ್ಲಿಜಿಲ್ಲೆ ಮಳೆನಾಡು ಪ್ರದೇಶವಾಗಲಿದ್ದು, ಈ ಭಾಗದಲ್ಲಿರುವ ನದಿಗಳು ಹರಿದುರೈತರು ಮತ್ತು ಜನಸಾಮಾನ್ಯರುಸಮೃದ್ಧವಾಗಿ ಜೀವನ ನಡೆಸುವುದರಲ್ಲಿ ಅನುಮಾನವಿಲ್ಲ ಎಂದರು.

ಕನ್ನಡ ಭಾಷೆ ವಿಷಯದಲ್ಲಿಮುಕ್ತ ಮನಸ್ಸಿನಿಂದ ಇರಬೇಕು.ಕೇವಲ ಆದೇಶ ದಿಂದ ಕನ್ನಡಭಾಷಾಭಿವೃದ್ಧಿ ಮಾಡುವ ಬದಲಿಗೆ ಇಚ್ಚಾಶಕ್ತಿ ಪ್ರದರ್ಶಿಸಬೇಕು. ಜಿಲ್ಲೆಯಗಡಿ ಪ್ರದೇಶಗಳಲ್ಲಿರುವ ಸರ್ಕಾರಿಶಾಲೆಗಳನ್ನು ಗಡಿ ಪ್ರದೇಶ ಅಭಿವೃದ್ಧಿಪ್ರಾಧಿಕಾರದಿಂದ ನೆರವು ಪಡೆದು ಅಭಿವೃದ್ಧಿಗೊಳಿಸಬೇಕು. ಕೆ.ಅಮರನಾರಾಯಣ, ಸಮ್ಮೇಳನಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next