Advertisement

ದೇಗುಲ ಅಭಿವೃದ್ಧಿಗೆ ಅನುದಾನ ವಿತರಣೆ

06:31 AM Jul 04, 2020 | Lakshmi GovindaRaj |

ಬಂಗಾರಪೇಟೆ: ತಾಲೂಕಿನ ಬಲಮಂದೆ ಗ್ರಾಮದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ತಿಮ್ಮರಾಯ ಸ್ವಾಮಿ ದೇವಾಲಯಕ್ಕೆ ಮುಜರಾಯಿ ನಿಧಿಯಿಂದ ಮೂರು ಲಕ್ಷ ರೂ. ಅನುದಾನವನ್ನು ಶಾಸಕ  ಎಸ್‌.ಎನ್‌.ನಾರಾಯಣಸ್ವಾಮಿ ಬಿಡುಗಡೆ ಮಾಡಿಸಿದ್ದಾರೆ ಎಂದು ತಾಪಂ ಅಧ್ಯಕ್ಷ ಟಿ.ಮಹದೇವ್‌ ಹೇಳಿದರು.

Advertisement

ತಾಪಂ ಕಚೇರಿಯಲ್ಲಿ ತಾಲೂಕಿನ ಬಲಮಂದೆ ಗ್ರಾಮದ ದೇಗುಲಕ್ಕೆ 3 ಲಕ್ಷ ರೂ. ಹಾಗೂ ತಮಟಮಾಕನಹಳ್ಳಿ ಗ್ರಾಮದ  ದೇಗುಲಕ್ಕೆ 50 ಸಾವಿರ ರೂ. ಅನುದಾನ ವಿತರಣೆ ಮಾಡಿ ಮಾತನಾಡಿದರು. ಹಿಂದೂ ಸಂಪ್ರದಾ ಯವನ್ನು ಮುನ್ನಡೆಸುವಸಲುವಾಗಿ ದೇವಾಲಯಗಳ ಅಭಿವೃದ್ಧಿಯೂ ಧಾರ್ಮಿಕಸೇವೆಯಾಗಿದೆ. ಸರ್ಕಾರವು ಮುಜರಾಯಿ ಇಲಾಖೆಯ ಮೂಲಕ ಪೋಷಣೆ ಮಾಡುತ್ತಿರುವುದಕ್ಕೆ ಸ್ಥಳೀಯ ಶಾಸಕ ಎಸ್‌.ಎನ್‌. ನಾರಾಯ ಣಸ್ವಾಮಿ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ಪಂಚಾಯತ್‌ ರಾಜ್‌ ಇಲಾಖೆ ಎಇಇ ಎಚ್‌.ಡಿ.ಶೇಷಾದ್ರಿ, ಸಹಾಯಕ ಎಂಜಿನಿಯರ್‌  ರವಿಚಂದ್ರನ್‌, ತಾಪಂ ಮಾಜಿ ಸದಸ್ಯ ಬಲಮಂದೆ ಶ್ರೀನಿವಾಸನಾಯ್ಡು, ಪೆದ್ದನ್ನ, ನಾರಾಯ ಣಪ್ಪ, ರಾಮಪ್ಪ, ಮಂಜುನಾಥ್‌, ಜನಾರ್ದನ ನಾಯ್ಡು, ಶ್ರೀನಾಥ್‌, ಶ್ರೀನಿವಾಸಪ್ಪ, ಗುರಪ್ಪ, ವೆಂಕಟೇಶಪ್ಪ, ರಾಜಪ್ಪ, ಮುರುಗೇಶ್‌, ಟಿ.ವೆಂಕಟ  ರಾಮಯ್ಯ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next