Advertisement

ಅನಾಥ ಮಕ್ಕಳಿಗೆ ಬಟ್ಟೆ ಕಿಟ್‌ ವಿತರಣೆ

03:30 PM Jan 09, 2022 | Team Udayavani |

ಸೈದಾಪುರ: ಪಟ್ಟಣದ ಪಿಪಿಟಿ ಫ್ಯಾಶನ್‌ ಕ್ಲಬ್‌ ವತಿಯಿಂದ ಬಡ ಹಾಗೂ ಅನಾಥ ಮಕ್ಕಳಿಗೆ ಬಟ್ಟೆ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

Advertisement

ಈ ವೇಳೆ ಜೆಡಿಎಸ್‌ ಯುವ ಮುಖಂಡ ಶರಣಗೌಡ ಕಂದಕೂರ ಮಾತನಾಡಿ, ನಾವು ಮಾಡುವ ಕಾರ್ಯ ಶ್ರದ್ಧೆ, ಪರಿಶ್ರಮದೊಂದಿಗೆ ಕೈಗೊಂಡರೆ ಉತ್ತಮ ಸಾಧನೆ ಸಾಧ್ಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ರಾಹಕರ ಬೇಡಿಕೆಗಳ ತಕ್ಕಂತೆ ಸೇವೆ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ ಎಂದರು.

ಪಿಪಿಟಿ ಫ್ಯಾಶನ್‌ ಕ್ಲಬ್‌ ಮಾಲೀಕ ಪ್ರಸಾದ ತೋರತ ಮಾತನಾಡಿದರು. ಡಾ| ಈಶ್ವರಲಾಲ್‌ ಅಲಿಝಾರ್‌, ಚಂದ್ರುಗೌಡ, ಶರಣಗೌಡ ಕ್ಯಾತ್ನಾಳ, ಮುಕುಂದಕಮಾರ ಅಲಿಝಾರ್‌, ಕೆ.ಬಿ. ಗೋವರ್ಧನ, ರಾಜೇಶ ಉಡುಪಿ, ಗ್ರಾಪಂ ಸದಸ್ಯ ರಾಕೇಶ ಕೋರೆ, ಅರ್ಜುನ ಚೌವ್ಹಾಣ, ತಿಮ್ಮರೆಡ್ಡಿ, ಆನಂದ ಮಿರಿಯಾಲ, ದೇವು ಘಂಟಿ, ಲಕ್ಷ್ಮಣ ನಾಯಕ, ಅಲ್ಲಾವುದ್ದೀನ್‌ ನೀಲಹಳ್ಳಿ, ಷಣ್ಮೂಖ, ಪ್ರಶಾಂತ ತೋರತ್‌ ಸೇರಿದಂತೆ ಇತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next