Advertisement
ಮಂಗಳೂರು ವಿ.ವಿ ಪರೀಕ್ಷೆಯಲ್ಲಿ ಎಂ.ಕಾಂ. ವಿಭಾಗದಲ್ಲಿ 9ನೇ ರ್ಯಾಂಕ್ ಪಡೆದ ಲವಿಟಾ ಮೋರಾಸ್ ಮತ್ತು ಬಿಸಿಎ ವಿಭಾಗದಲ್ಲಿ 4ನೇ ರ್ಯಾಂಕ್ ಪಡೆದ ಸತ್ಯಸುಬ್ರಹ್ಮಣ್ಯ ಅವರನ್ನು ಮುಖ್ಯ ಅತಿಥಿ ಸಂತ ಮೇರಿ ಪ.ಪೂ.ಕಾಲೇಜಿನ ಪ್ರಾಂಶುಪಾಲೆ ಐರಿನ್ ಮೆಂಡೋನ್ಸಾ, ಕಾಲೇಜಿನ ವತಿಯಿಂದ ಸಮ್ಮಾನಿಸಿದರು. ಎಂ.ಕಾಂ.ಕೋ-ಆರ್ಡಿನೇಟರ್ ಜಗದೀಶ್ ಮತ್ತು ಬಿಸಿಎವಿಭಾಗದ ಮುಖ್ಯಸ್ಥ ಲೆಪ್ಟಿನೆಂಟ್ ಕೆ.ಪ್ರವೀಣ್ ಕುಮಾರ್ ರ್ಯಾಂಕ್ ವಿಜೇತರ ಪರಿಚಯ ಮಾಡಿದರು.
Related Articles
Advertisement
ಡಾಕ್ಟರೇಟ್ ಪದವಿ ಪಡೆದ ಸಂಸ್ಥೆಯ ಉಪನ್ಯಾಸಕಿ ಗುಲಾಬಿ ಪೂಜಾರಿ,ಸಾಧಕ ಉಪನ್ಯಾಸಕ ವಿಟuಲ ನಾಯಕ್, ಉಪನ್ಯಾಸಕಿ ಪದ್ಮಾಸಿನಿ ಅವರನ್ನು ಗೌರವಿಸಲಾಯಿತು.ನವೀಕೃತಗೊಂಡ ಕಾಲೇಜಿನ ಕಂಪ್ಯೂಟರ್ ಲ್ಯಾಬ್ನ್ನು ಸಂಚಾಲಕ ರೆ|ಫಾ| ಡೆನ್ನಿಸ್ ಡೇಸಾ ಉದ್ಘಾಟಿಸಿ ಶುಭ ಹಾರೈಸಿದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಜೆಸಿಂತಾ ಡಿಸೋಜಾ, ಕಚೇರಿ ಅಧೀಕ್ಷಕಿ ಡೊರಿನ್ ಡಿ’ಸಿಲ್ವಾ ಮತ್ತು ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶೈಲಾ ವಿಯೋನಾ ಕ್ಯಾಸ್ತಲಿನೋ ವೇದಿಕೆಯಲ್ಲಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ|ಹೆರಾಲ್ಡ್ ಮೋನಿಸ್ ವಾರ್ಷಿಕ ವರದಿ ಮಂಡಿಸಿದರು.
ಚರ್ಚ್ ಆರ್ಥಿಕ ಮಂಡಳಿಯ ಕಾರ್ಯದರ್ಶಿ ಲೀನಾ ಮಚಾದೋ,ಕಾಲೇಜು ಆಡಳಿತ ಮಂಡಳಿಯ ಸದಸ್ಯರು, ಉಪನ್ಯಾಸಕ ವೃಂದ,ಹೆತ್ತವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಯಶೋದಾ ಸ್ವಾಗತಿಸಿದರು. ಉಪನ್ಯಾಸಕಿ ಸುಷ್ಮಾ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ದಾಕ್ಷಾಯಿನಿ ವಂದಿಸಿದರು.