Advertisement

ಒಟಿಪಿ ಇಲ್ಲದೆ ಪಡಿತರ ವಿತರಿಸಿ: ಕೋಟ ಮರುಆದೇಶ

12:51 PM Apr 06, 2020 | Sriram |

ಸುಳ್ಯ: ಪಡಿತರ ವಿತರಣೆಗೆ ಸಂಬಂಧಿಸಿ ಸುಳ್ಯ ತಾಲೂಕಿನಲ್ಲಿ ಒಟಿಪಿ ವ್ಯವಸ್ಥೆಯನ್ನು ತತ್‌ಕ್ಷಣ ರದ್ದುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

Advertisement

“ಸುಳ್ಯ: ಒಟಿಪಿ ಇಲ್ಲದೆ ನೀಡುತ್ತಿಲ್ಲ ಪಡಿತರ’ ಎಂಬ ಶಿರ್ಷಿಕೆಯಡಿ ಎ. 5ರಂದು ಉದಯವಾಣಿ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿ, ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಪರ ಮುಖ್ಯಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ರದ್ದು ಆದೇಶವನ್ನು ತತ್‌ಕ್ಷಣ ಜಾರಿ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲು ನಿರ್ದೇಶಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಕೋವಿಡ್ 19 ಮಹಾಮಾರಿ ಭೀತಿ ಇದ್ದು, ಪಡಿತರ ವಿತರಣೆ ಸಂದರ್ಭ ನೆಟ್‌ವರ್ಕ್‌ ಇಲ್ಲದ ಕಡೆ ಒಟಿಪಿ ನಿಯಮ ಪಾಲನೆಯಿಂದ ಸಮಸ್ಯೆಯಾಗಿತ್ತು.

ಆದೇಶ ತತ್‌ಕ್ಷಣ ಜಾರಿ: ಜಿಲ್ಲಾಧಿಕಾರಿ
ಸಚಿವರ ಆದೇಶವನ್ನು ತತ್‌ಕ್ಷಣ ಜಾರಿಗೊಳಿಸುವಂತೆ ದ.ಕ. ಜಿಲ್ಲಾಧಿಕಾರಿ ಸಿಂದೂ ಬಿ. ರೂಪೇಶ್‌ ಅವರು ಸುಳ್ಯ ತಹ
ಶೀಲ್ದಾರ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ತಹಶೀಲ್ದಾರ್‌, ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ಅವರು ಪ್ರತಿ ನ್ಯಾಯಬೆಲೆ ಅಂಗಡಿಯ ಮೇಲುಸ್ತುವಾರಿ ನೋಡಿಕೊಳ್ಳಬೇಕು. ವಿತರಣೆ ಸಂದರ್ಭ ರಿಜಿಸ್ಟ್ರರನ್ನು ನಿರ್ವಹಿಸಿ ಪಡಿತರ ಚೀಟಿ ಸಂಖ್ಯೆ, ಮೊಬೈಲ್‌ ನಂಬರ್‌ ನಮೂದಿಸಿ ಪಡಿತರ ಚೀಟಿದಾರರ ಸಹಿ ಪಡೆದುಕೊಳ್ಳುವುದು, ಮೂರನೇ ವ್ಯಕ್ತಿಯ ಮೂಲಕ ಪಡಿತರ ವಿತರಿಸದೆ ಇರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next