Advertisement

ಕಿರಣ್‌ ರಿಜಿಜು, ಜಗದೀಪ್‌ ಧನಕರ್‌ ವಿರುದ್ಧ ಸುಪ್ರೀಂಗೆ ಅರ್ಜಿ

10:59 PM Mar 28, 2023 | Team Udayavani |

ನವದೆಹಲಿ: ಕಾನೂನು ಸಚಿವ ಕಿರಣ್‌ ರಿಜಿಜು ಹಾಗೂ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ವಿರುದ್ಧ ಬಾಂಬೆ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್‌ ನಿರ್ಣಯ ಪ್ರಶ್ನಿಸಿ, ಅಸೋಸಿಯೇಷನ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ.

Advertisement

“ಕೊಲಿಜಿಯಂನ ನೇಮಕ ಪ್ರಕ್ರಿಯೆ ಪಾರದರ್ಶಕವಾಗಿಲ್ಲ’ ಎಂದು ರಿಜಿಜು ಹಾಗೂ 1973ರ ಕೇಶವಾನಂದ ಭಾರತೀ ಪ್ರಕರಣದ ತೀರ್ಪನ್ನು ಕೆಟ್ಟ ನಿದರ್ಶನವೆಂದು ಉಪ ರಾಷ್ಟ್ರಪತಿ ಜರಿದಿದ್ದರು. ಈ ಹಿನ್ನೆಲೆ ಈ ಇಬ್ಬರಿಗೂ ದೇಶದ ನ್ಯಾಯಾಂಗ, ಸಂವಿಧಾನದ ಬಗ್ಗೆ ನಂಬಿಕೆ ಇಲ್ಲವೆಂದು ಆರೋಪಿಸಿ, ಅವರಿಬ್ಬರ ಪದಚ್ಯುತಿ ಕೋರಿ ವಕೀಲರ ಸಂಘ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next