Advertisement

ಥಳಿಸಿ ಹತ್ಯೆ ತಡೆ ಶಿಫಾರಸಿನ ಬಗ್ಗೆ ಚರ್ಚೆ

06:00 AM Sep 06, 2018 | Team Udayavani |

ನವದೆಹಲಿ: ವದಂತಿಗಳನ್ನು ನಂಬಿ ಥಳಿಸಿ ಹತ್ಯೆ ತಡೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಮಿತಿ ಸಲ್ಲಿಸಿದ ವರದಿ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದ ಸಚಿವರ ಸಮಿತಿ ಬುಧವಾರ ಪರಿಶೀಲನೆ ನಡೆಸಿತು. ಗೃಹ ಕಾರ್ಯದರ್ಶಿ ರಾಜೀವ್‌ ಗೌಬಾ ನೇತೃತ್ವದ ಸಮಿತಿ ವರದಿ ಸಲ್ಲಿಸಿದ ಬಳಿಕ ಮೊದಲ ಸಭೆ ಇದಾಗಿದೆ. ಮುಂದಿನ ದಿನಗಳಲ್ಲಿ ಸಮಿತಿ ಮತ್ತಷ್ಟು ಬಾರಿ ಸಭೆ ನಡೆಸಲೂ ತೀರ್ಮಾನಿಸಲಾಗಿದೆ. ಕನ್ನಡದಲ್ಲೂ ಅಭಿಯಾನ: ಮತ್ತೂಂದು ಬೆಳವಣಿಯಲ್ಲಿ ಸುಳ್ಳು ಸುದ್ದಿಗಳ ಬಗ್ಗೆ ಅರಿವು ಮೂಡಿಸಲು ಮುಂದಾಗಿರುವ ವಾಟ್ಸ್‌ ಆ್ಯಪ್‌ ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಸೆ.5ರಿಂದ ಆಕಾಶವಾಣಿ ಮೂಲಕ ಅಭಿಯಾನ ಆರಂಭಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next