Advertisement

Discount: ಬೆಂಗಳೂರಿನಲ್ಲೂ ರಿಯಾಯಿತಿ ಬೆಲೆಯಲ್ಲಿ ಸಿಗಲಿದೆ ಈರುಳ್ಳಿ: ಕೇಂದ್ರ ಸರಕಾರ

08:34 PM Sep 15, 2024 | Team Udayavani |

ಹೊಸದಿಲ್ಲಿ: ಈರುಳ್ಳಿ ಬೆಲೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಸೆ.5ರಂದು ಕೇಂದ್ರ ಸರಕಾರ‌ ಆರಂಭಿಸಿದ್ದ ರಿಯಾಯಿತಿ ಬೆಲೆಯ ಮಾರಾಟ ಯೋಜನೆ ಬೆಂಗಳೂರು ಸೇರಿ ಇನ್ನಷ್ಟು ನಗರಗಳಿಗೆ ವಿಸ್ತರಣೆಯಾಗಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲ­ಯವು ತಿಳಿಸಿದೆ.

Advertisement

ಕೇಂದ್ರ ಸರಕಾರ‌ ಈ ಯೋಜನೆ ಆರಂಭಿಸಿದ ಬಳಿಕ ಈರುಳ್ಳಿ ಬೆಲೆ ಇಳಿಕೆಯಾಗಿತ್ತು. ಈ ಯೋಜನೆಯಲ್ಲಿ ಕೆ.ಜಿ. ಈರುಳ್ಳಿ ಬೆಲೆ 35 ರೂ. ಇರಲಿದೆ. ಈ ಯೋಜನೆಯನ್ನು ಈಗ ಬೆಂಗಳೂರು, ಚೆನ್ನೈ, ಕೋಲ್ಕತಾ, ಪಟ್ನಾ, ರಾಂಚಿ, ಭುವನೇಶ್ವರ ಹಾಗೂ ಗುವಾಹಾಟಿಗೆ ವಿಸ್ತರಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next