Advertisement
ಇವರೇ ಉಗ್ರರಿಗೆ ಸ್ಫೋಟಕಗಳನ್ನೂ ನೀಡಿದ್ದಾರೆ ಎನ್ನಲಾಗಿದೆ. ಗುಪ್ತಚರ ಮೂಲಗಳ ಪ್ರಕಾರ, ಕಳೆದ ತಿಂಗಳು ಪೂಂಛ… ಮೂಲಕ ದೇಶದೊಳಕ್ಕೆ 15 ಜೈಶ್ ಉಗ್ರರು ನುಸುಳಿದ್ದರು. ಈ ಪೈಕಿ ಕಮ್ರನ್, ಸ್ಫೋಟಕ ಹಾಗೂ ಅದನ್ನು ಕಾರಿಗೆ ಅಳವಡಿಸುವ ಸಲಕರಣೆಯನ್ನು ಗಡಿಯಿಂದೀಚೆಗೆ ತಂದು, ಉಗ್ರರಿಗೆ ತರಬೇತಿ ನೀಡಿದ್ದ.
Related Articles
Advertisement
ಜೈಶ್ ಅಲ್ ಅದ್É ಎಂಬ ಉಗ್ರ ಸಂಘಟನೆ ಈ ದಾಳಿ ನಡೆಸಿದೆ ಎನ್ನಲಾಗಿದೆ. ಈ ಮಧ್ಯೆ ಮೂರು ದೇಶಗಳ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬಲ್ಗೇರಿಯಾಗೆ ತೆರಳುವ ಮಾರ್ಗ ಮಧ್ಯೆ ಇರಾನ್ನಲ್ಲಿ ಇಳಿದು, ಅಲ್ಲಿನ ವಿದೇಶಾಂಗ ಖಾತೆಯ ಉಪ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಕಾಶ್ಮೀರದಲ್ಲಿ ಬಂದ್ಜಮ್ಮು ಮತ್ತು ರಾಜ್ಯದ ಹೊರಗಡೆ ಕಾಶ್ಮೀರಿಗರ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ಕಣಿವೆ ರಾಜ್ಯದ ವ್ಯಾಪಾರಿಗಳು ಕರೆ ನೀಡಿದ್ದ ಬಂದ್ನಿಂದಾಗಿ ಭಾನುವಾರ ಜನಜೀವನ ಅಸ್ತವ್ಯಸ್ತವಾಯಿತು. ಹಲವೆಡೆ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಲಾಯಿತು. ಇನ್ನೊಂದೆಡೆ, ಜಮ್ಮುವಿನಲ್ಲಿ ಭಾನುವಾರವೂ ಕರ್ಫ್ಯೂ ಮುಂದುವರಿದಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಸೇನೆ ಧ್ವಜ ಪಥಸಂಚಲನ ನಡೆಸಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ನಾಗರಿಕ ಮುಖಂಡರೊಂದಿಗೆ ಸರಣಿ ಸಭೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಮಾತುಕತೆಯನ್ನೂ ನಡೆಸಿದ್ದಾರೆ. ಕಾಶ್ಮೀರದ ಬಂದ್ಗೆ ಕಾಶ್ಮೀರ ಆರ್ಥಿಕ ಒಕ್ಕೂಟ ಮತ್ತು ಕಾಶ್ಮೀರ ಮಾರಾಟಗಾರರು ಮತ್ತು ತಯಾರಿಕೆದಾರರ ಒಕ್ಕೂಟ, ಸಾರಿಗೆ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ಬಹುತೇಕ ಕಡೆಗಳಲ್ಲಿ ಟ್ಯಾಕ್ಸಿ, ಕ್ಯಾಬ್ಗಳು ಸಂಚಾರ ಸ್ಥಗಿತಗೊಳಿಸಿದ್ದವು. ಖಾಸಗಿ ಕಾರುಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗಲಿಲ್ಲ.