Advertisement

ʼಕೆಜಿಎಫ್‌ -2ʼ, ಯಶ್‌ ಬಗ್ಗೆ ನಿಂದನಾತ್ಮಕ ಮಾತು: ಟಾಲಿವುಡ್‌ ನಿರ್ದೇಶಕನ ವಿರುದ್ಧ ಆಕ್ರೋಶ

04:26 PM Mar 06, 2023 | Team Udayavani |

ಹೈದರಾಬಾದ್ : ಕನ್ನಡ ಮಾತ್ರವಲ್ಲದೆ ಭಾರತ ಚಿತ್ರರಂಗದಲ್ಲಿ ಒಂದು ಹೊಸ ದಾಖಲೆ ಬರೆದ ಪ್ರಶಾಂತ್‌ ನೀಲ್‌ ಅವರ ಪ್ಯಾನ್‌ ಇಂಡಿಯಾ ಸಿನಿಮಾ ʼಕೆಜಿಎಫ್‌ -2ʼ ಬಗ್ಗೆ ಟಾಲಿವುಡ್‌ ನಿರ್ದೇಶಕರೊಬ್ಬರು ನಿಂದನಾತ್ಮಕ ಮಾತುಗಳನ್ನಾಡಿ ಪೇಚಿಗೆ ಸಿಲುಕಿದ್ದಾರೆ.

Advertisement

ʼC/o ಕಂಚರಪಾಲೆಂʼ,ʼ ಮಾಡರ್ನ್ ಲವ್ ಹೈದರಾಬಾದ್ʼ ಸಿನಿಮಾಗಳನ್ನು ಮಾಡಿರುವ ವೆಂಕಟೇಶ್‌ ಮಹಾ ಇತ್ತೀಚೆಗೆ ರೌಂಡ್‌ ಟೇಬಲ್ ಸಂದರ್ಶನದಲ್ಲಿ ಮಾತನಾಡುವ ವೇಳೆ ʼಕೆಜಿಎಫ್‌-2ʼ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ಇಂದ್ರಗಂಟಿ ಮೋಹನ ಕೃಷ್ಣ, ನಂದಿನಿ ರೆಡ್ಡಿ, ಶಿವ ನಿರ್ವಾಣ ಮತ್ತು ವಿವೇಕ್ ಆತ್ರೇಯ ಅವರೊಂದಿಗೆ ರೌಂಡ್‌ ಟೇಬರ್‌ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ವೆಂಕಟೇಶ್‌ ಮಹಾ ಮಾತನಾಡುತ್ತಾ ಒಂದು ಸಿನಿಮಾದಲ್ಲಿ ನಾಯಕನ ತಾಯಿ ತನ್ನ ಮಗ ಶ್ರೀಮಂತನಾಗಬೇಕೆಂದು ಬಯಸುತ್ತಾಳೆ. ಆತ ಜನರನ್ನು ಬಳಸಿ ಶ್ರೀಮಂತನಾಗುತ್ತಾನೆ. ಆದರೆ ಆ ಬಳಿಕ ಜನರಿಗೆ ಆತ ಏನನ್ನೂ ನೀಡುವುದಿಲ್ಲ ಎಂದು ಸಿನಿಮಾದ ಹೆಸರನ್ನು ಹೇಳದೇ ಹೀಯಾಳಿಸಿದ್ದಾರೆ. ಇದು ʼಕೆಜಿಎಫ್‌ -2ʼ ಕಥೆಯ ಎಳೆಯಾಗಿದ್ದು, ಇದರೊಂದಿಗೆ ನಾಯಕನ ಪಾತ್ರದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈ ಮಾತನ್ನು ಕೇಳಿ ಅಲ್ಲಿದ್ದ ಉಳಿದ ನಿರ್ದೇಶಕರು ಕೂಡ ಜೋರಾಗಿ ನಕ್ಕಿದ್ದಾರೆ.

ಇದನ್ನೂ ಓದಿ: ಶಾರುಖ್‌ ಜತೆ ʼಜವಾನ್‌ʼ ನಲ್ಲಿ ಶಿವರಾಜ್‌ ಕುಮಾರ್‌ ನಟನೆ? ಹೆಚ್ಚಾಯಿತು ಶಿವಣ್ಣನ ಬೇಡಿಕೆ

ಸದ್ಯ ಈ ವಿಡಿಯೋ ಕ್ಲಿಪ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಒಬ್ಬ ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕರ ಬಗ್ಗೆ ಈ ರೀತಿ ಮಾತನಾಡುವುದು ತಪ್ಪು, ಮೊದಲು ನಟ ಯಶ್‌ ರಲ್ಲಿ ಕ್ಷಮೆ ಕೇಳಿ ಇಲ್ಲದಿದ್ರೆ ಪರಿಣಾಮ ಒಳ್ಳೆದಿರಲ್ಲ. ಕೇವಲ ಎರಡು ಸಿನಿಮಾ ಮಾಡಿ ದೊಡ್ಡ ಸಿನಿಮಾದ ಬಗ್ಗೆ ಈ ರೀತಿ ಟೀಕಿಸುವುದು ಸರಿಯಲ್ಲ ಎಂದು ಫ್ಯಾನ್ಸ್‌ ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕೆಲವರು ವೆಂಕಟೇಶ್‌ ಅವರ ಅಭಿಪ್ರಾಯಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಇನ್ನು ಕೆಲ ಟಾಲಿವುಡ್‌ ಫ್ಯಾನ್ಸ್‌ ಗಳೇ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಂದರ್ಶನದಲ್ಲಿ ಭಾಗಿಯಾಗಿದ್ದ ನಿರ್ದೇಶಕಿ ನಂದಿನಿ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಇದು ಯಾರನ್ನೂ ಉದ್ದೇಶಪೂರ್ವಕವಾಗಿ ನೋವು ತರಲು ಹೇಳಿದ ಮಾತಲ್ಲ. ಈ ವಿಚಾರವನ್ನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next