Advertisement

ವಿತರಣೆಯತ್ತ ಸತ್ಯ ಪ್ರಕಾಶ್‌..: ರಾಮಾ ರಾಮಾ ರೇ ನಿರ್ದೇಶಕನ ಹೊಸ ಸಾಹಸ

01:42 PM Jan 08, 2022 | Team Udayavani |

“ರಾಮಾ ರಾಮಾ ರೇ’, “ಒಂದಲ್ಲ ಎರಡಲ್ಲ’ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಡಿ. ಸತ್ಯ ಪ್ರಕಾಶ್‌ ಈಗ ಸಿನಿಮಾಗಳ ನಿರ್ಮಾಣ ಮತ್ತು ನಿರ್ದೇಶನದ ಜೊತೆಗೆ ವಿತರಣೆಗೂ ಮುಂದಾಗಿದ್ದಾರೆ. “ಸತ್ಯ ಸಿನಿ ಡಿಸ್ಟ್ರಿಬ್ಯೂಟರ್’ ಹೆಸರಿನಲ್ಲಿ ಸಮಾನ ಮನಸ್ಕರ ಜೊತೆ ಸೇರಿಕೊಂಡು ಸತ್ಯ ಪ್ರಕಾಶ್‌ ಸದಭಿರುಚಿ ಸಿನಿಮಾಗಳ ವಿತರಣೆಗೆ ಅಣಿಯಾಗಿದ್ದಾರೆ. ಇತ್ತೀಚೆಗೆ ಸತ್ಯ ಪ್ರಕಾಶ್‌ ಮತ್ತು ತಂಡ ತಮ್ಮ ಹೊಸ ವೆಂಚರ್ಗೆ ಚಾಲನೆ ನೀಡಿತು. ನಟ ಡಾಲಿ ಧನಂಜಯ್‌ “ಸತ್ಯ ಸಿನಿ ಡಿಸ್ಟ್ರಿಬ್ಯೂಟರ್’ ಸಂಸ್ಥೆಯ ಲಾಂಛನವನ್ನು ಬಿಡುಗಡೆಗೊಳಿಸಿ, ಸತ್ಯ ಪ್ರಕಾಶ್‌ ಮತ್ತು ತಂಡದವರ ಹೊಸ ಸಾಹಸಕ್ಕೆ ಶುಭ ಕೋರಿದರು.

Advertisement

ಇದೇ ವೇಳೆ ಮಾತನಾಡಿದ ಡಿ. ಸತ್ಯ ಪ್ರಕಾಶ್‌, “ಇಂದಿನ ದಿನಗಳಲ್ಲಿ ಒಳ್ಳೆಯ ಕಂಟೆಂಟ್‌ ಹುಡುಕಿ ಸಿನಿಮಾ ಮಾಡುವುದು ಒಂದು ಥರದ ಚಾಲೆಂಜ್‌ ಆದರೆ, ಅದನ್ನು ಸಿನಿಮಾ ಮಾಡಿದ ಮೇಲೆ ಥಿಯೇಟರ್‌ನಲ್ಲಿ ರಿಲೀಸ್‌ ಮಾಡುವುದು ಇನ್ನೊಂದು ದೊಡ್ಡ ಚಾಲೆಂಜ್‌. ನನ್ನ ಹಿಂದಿನ ಸಿನಿಮಾಗಳ ಬಿಡುಗಡೆಯ ಸಂದರ್ಭದಲ್ಲಿ ನಾನು ಅನುಭವಿಸಿದ ಸಂಕಷ್ಟಗಳನ್ನು ಅರಿತುಕೊಂಡ ಬಳಿಕ, ಅದಕ್ಕೆ ನಾವೇ ಏನಾದ್ರೂ ಪರಿಹಾರ ಕಂಡುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸಿನಿಮಾ ವಿತರಣೆ ಮಾಡುವ ನಿರ್ಧಾರಕ್ಕೆ ಬರಬೇಕಾಯ್ತು. ನನ್ನ ಈ ಯೋಚನೆಗೆ ಸಮಾನ ಮನಸ್ಕ ಸ್ನೇಹಿತರು ಬೆಂಬಲವಾಗಿ ನಿಂತರು’ ಎಂದರು.

ಇದನ್ನೂ ಓದಿ:ಇಂದು ರಾಕಿಂಗ್ ಸ್ಟಾರ್ ಯಶ್‌ ಬರ್ತ್‌ಡೇ: ಮುಂದಿನ ಸಿನಿಮಾ ಬಗ್ಗೆ ಹೆಚ್ಚಿದ ಕುತೂಹಲ

ಇನ್ನು, ತಮ್ಮ ವಿತರಣಾ ಸಂಸ್ಥೆಯ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಅನೇಕ ನಿರ್ಮಾಪಕ, ನಿರ್ದೇಶಕರು ಭಾಗಿಯಾಗಿ, ಶುಭಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next