Advertisement

ಅರ್ಚಕರ ಬ್ಯಾಂಕ್‌ ಖಾತೆಗೆ ತಸ್ತೀಕ್‌ ಹಣ ನೇರ ವರ್ಗಾವಣೆ: ಎಂ.ಬಿ.ಪಾಟೀಲ್‌

10:38 PM Feb 19, 2024 | Team Udayavani |

ಬೆಂಗಳೂರು: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಸಂಸ್ಥೆಗಳ ದೇವಸ್ಥಾನದ ಅರ್ಚಕರ ಬ್ಯಾಂಕ್‌ ಖಾತೆಗೆ ತಸ್ತೀಕ್‌ ಹಣವನ್ನು ಇನ್ನು ಮುಂದೆ ನೇರ ವರ್ಗಾವಣೆ ಮಾಡಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದರು.

Advertisement

ಈ ಕುರಿತು ಗಮನ ಸೆಳೆದ ಬಿಜೆಪಿಯ ಆರಗ ಜ್ಞಾನೇಂದ್ರ, ಅರ್ಚಕರಿಗೆ ಸಕಾಲದಲ್ಲಿ ತಸ್ತೀಕ್‌ ತಲುಪುತ್ತಿಲ್ಲ. ಮುಜರಾಯಿ ದೇವಸ್ಥಾನಗಳಿಗೇ ರಕ್ಷಣೆ ಇಲ್ಲದಂತಾಗಿದೆ. ಡಿ ದರ್ಜೆಯ ದೇಗುಲಗಳನ್ನು ದೇವರೇ ಕಾಪಾಡಬೇಕು. ಪೂಜಾ ಪರಿಕರಗಳಿಗೂ ಗತಿ ಇಲ್ಲದ ಸ್ಥಿತಿ ಇದೆ ಎಂದರು.

ಇದಕ್ಕೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಪರವಾಗಿ ಉತ್ತರಿಸಿದ ಸಚಿವ ಪಾಟೀಲ್‌, ತಸ್ತೀಕ್‌ನ 60 ಸಾವಿರರೂ.ಗಳನ್ನು 2 ಕಂತುಗಳಲ್ಲಿ ತಹಶೀಲ್ದಾರ್‌ಗೆ ಕೊಟ್ಟು ಅವರ ಮೂಲಕ ನೇರವಾಗಿ ಅರ್ಚಕರ ಖಾತೆಗೆ ಕಳುಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅರ್ಚಕರ ಖಾತೆಗೇ ಜಮೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next