Advertisement

ಜಿದ್ದಾ ಜಿದ್ದಿನ ಕದನದಲ್ಲಿ ಪ್ರಯಾಸದ ಗೆಲುವು ಸಾಧಿಸಿದ ದಿನೇಶ್ ಗುಂಡೂರಾವ್

02:27 PM May 13, 2023 | Team Udayavani |

ಬೆಂಗಳೂರು : ಕಾಂಗ್ರೆಸ್ ಪ್ರಭಾವಿ ನಾಯಕ ದಿನೇಶ್ ಗುಂಡೂರಾವ್ ಅವರು ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಅವರ ಗೆಲುವಿನ ಅಂತರ 113 ಮತಗಳು.

Advertisement

ದಿನೇಶ್ ಗುಂಡು ರಾವ್ 53980 ಮತಗಳನ್ನು ಪಡೆದರೆ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ಎ ಆರ್ ಅವರು 53867 ಮತಗಳನ್ನು ಪಡೆದಿದ್ದಾರೆ.

ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೃಷ್ಣಯ್ಯ ಶೆಟ್ಟಿ ಮಾಲೂರು ಅವರು 6862 ಮತಗಳನ್ನು ಪಡೆದಿದ್ದರೆ, ಜೆಡಿಎಸ್ ನ ವಿ ನಾರಾಯಣಸ್ವಾಮಿ 12832 ಮತಗಳನ್ನು ಪಡೆದಿದ್ದಾರೆ. ದಿನೇಶ್ ಗುಂಡು ರಾವ್ 5 ನೇ ಜಯ ಇದಾಗಿದೆ.

ಕಡಿಮೆ ಅಂತರದ ಗೆಲುವು ಕಂಡ ಹಿನ್ನಲೆಯಲ್ಲಿ ಮತಗಳನ್ನು ಮರು ಎಣಿಕೆ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next