Advertisement

ಪ್ರಧಾನಿ ಬಂದಷ್ಟೂ ‘ಕೈ’ ಗೆ ಪ್ಲಸ್, ಇಲ್ಲಿಯೇ ಅವರು ಮನೆ ಮಾಡಲಿ: ದಿನೇಶ್ ಗುಂಡೂರಾವ್

01:25 PM May 05, 2023 | Team Udayavani |

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದಷ್ಟೂ ಕಾಂಗ್ರೆಸ್ ಗೆ ಪ್ಲಸ್ ಆಗಲಿದೆ. ಹಾಗಾಗಿ, ಇಲ್ಲಿಯೇ ಪ್ರಧಾನಿ ಮನೆ ಮಾಡುವುದು ಉತ್ತಮ’ ಎಂದು ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ತಿಳಿಸಿದರು.

Advertisement

ಪ್ರಧಾನಿ ರಾಜ್ಯಕ್ಕೆ ಬಂದಷ್ಟೂ ಬಿಜೆಪಿಗೆ ಲಾಭವಾಗುತ್ತಿಲ್ಲ. ಬದಲಿಗೆ ಡ್ಯಾಮೇಜ್ ಆಗುತ್ತಿದೆ. ಪ್ರತಿಯಾಗಿ ನಮಗೆ ಪ್ಲಸ್ ಆಗುತ್ತಿದೆ. ಯಾಕೆಂದರೆ, ಅವರು ಹೀಗೆ ಬೀದಿ ಬೀದಿ ಸುತ್ತುತ್ತಿರುವ ಬಗ್ಗೆ ಜನರಲ್ಲಿ ನಕಾರಾತ್ಮಕ ಭಾವ ಮೂಡುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದನ್ನೂ ಓದಿ:ಭಾರತ-ಪಾಕ್ ಪಂದ್ಯಕ್ಕೆ ಮೈದಾನ ಸಜ್ಜು: ಬೆಂಗಳೂರಲ್ಲೂ ನಡೆಯಲಿದೆ ವಿಶ್ವಕಪ್ ಪಂದ್ಯ

ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಗಡಿ, ಕೆಲವು ರಾಜ್ಯಗಳಲ್ಲಿನ ಸಂಘರ್ಷ ಸೇರಿದಂತೆ ಅನೇಕ ವಿಚಾರಗಳಿವೆ. ಅವೆಲ್ಲವುಗಳನ್ನು ಬಿಟ್ಟು ಹೀಗೆ ಬೀದಿ ಬೀದಿ ಅಲೆಯುವ ಮೂಲಕ ಸ್ವತಃ ಮೋದಿ ಅವರು ಕೂಡ ಪ್ರಧಾನಿ ಹುದ್ದೆಗೆ ಅಪಮಾನ ಮಾಡುತ್ತಿದ್ದಾರೆ ಎಂದೂ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next