Advertisement

ಶಾಸಕ ಜಾಧವ ಸಹೋದರಗೆ ದಿನೇಶ ಗುಂಡೂರಾವ್‌ ಕರೆ

12:55 AM Jan 18, 2019 | Team Udayavani |

ಕಲಬುರಗಿ: ಕಳೆದ ನಾಲ್ಕು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದೇ ದೂರ ಉಳಿದಿರುವ ಜಿಲ್ಲೆಯ ಚಿಂಚೋಳಿ ಕ್ಷೇತ್ರದ ಶಾಸಕ ಡಾ.ಉಮೇಶ ಜಾಧವ ಅವರ ಸಹೋದರ ರಾಮಚಂದ್ರ ಜಾಧವ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಗುರುವಾರ ದೂರವಾಣಿ ಕರೆ ಮಾಡಿ ಶುಕ್ರವಾರ ನಡೆಯುವ ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.

Advertisement

ಏನೇ ಸಮಸ್ಯೆಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಕುಳಿತು ಚರ್ಚಿಸೋಣ.ಆದ್ದರಿಂದ ತಮ್ಮ ಸಹೋದರರಿಗೆ ಬೆಂಗಳೂರಿನಲ್ಲಿ ನಡೆಯುವ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳಲು ಹೇಳಿ. ಪಕ್ಷ ತಮ್ಮ ಜತೆಗೆ ಇದೆ ಎಂದು ದಿನೇಶ ಗುಂಡೂರಾವ್‌ ಹೇಳಿದ್ದಾರೆ ಎಂದು ರಾಮಚಂದ್ರ ಜಾಧವ “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next