Advertisement

ಬಿಎಸ್‌ವೈ ಎಲ್ಲಿ ಮಲಗ್ತಾರೆ ಅಂತ ನನಗೂ ಗೊತ್ತು:ದಿನೇಶ

06:00 AM Dec 11, 2018 | Team Udayavani |

ಕೊಪ್ಪಳ: ಯಡಿಯೂರಪ್ಪ ಎಲ್ಲಿ ಮಲಗುತ್ತಾರೆ ಎನ್ನುವುದು ನನಗೂ ಗೊತ್ತಿದೆ. ಅವರು ಎಲ್ಲಿ ಮಲಗುತ್ತಾರೆ ಎಂದೆಲ್ಲ ಹೇಳಕ್ಕಾಗಲ್ಲ. ಸಿಎಂ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎನ್ನುವ ಅವರೇನು ಸತ್ಯ ಹರಿಶ್ಚಂದ್ರನಾ?. ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ನಡೆಸಿದ ವಾಗ್ಧಾಳಿ.

Advertisement

ನಗರದಲ್ಲಿ ಮಾತನಾಡಿದ ಅವರು, ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಹೋಟೆಲ್‌ನಲ್ಲಿ ವಾಸ್ತವ್ಯ ಮಾಡುವ ಬಗ್ಗೆ ಬಿಎಸ್‌ವೈ ಟೀಕಿಸಿದ್ದಾರೆ. ಆದರೆ, ಯಡಿಯೂರಪ್ಪ ಎಲ್ಲಿ ಮಲಗುತ್ತಾರೆ ಎನ್ನುವುದು ನನಗೂ ಗೊತ್ತಿದೆ. ಅವರು ಈ ರೀತಿ ವೈಯಕ್ತಿಕ ವಿಚಾರ ಕೆದಕಬಾರದು. ಅವರು ಎಲ್ಲಿ ಮಲಗುತ್ತಾರೆ ಎಂದೆಲ್ಲ ಹೇಳಕ್ಕಾಗಲ್ಲ. ಸಿಎಂ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎನ್ನುವ ಅವರು ಅವರೇನು ಸತ್ಯ ಹರಿಶ್ಚಂದ್ರನಾ? ಈ ಮಾತನ್ನು ಬೇರೆ ಯಾರಾದ್ರು ಮಾತನಾಡಿದ್ರೆ ಮಾತನಾಡಬಹುದಿತ್ತು. ಆದರೆ ಅವರೇ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ನಾನು ಆ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದರು.
 

Advertisement

Udayavani is now on Telegram. Click here to join our channel and stay updated with the latest news.

Next