Advertisement

ಅಗ್ನಿವೀರರು ಬಿಜೆಪಿ ಕಚೇರಿ ಗೇಟ್‌ ಕಾಯಬೇಕಾ: ಗುಂಡೂರಾವ್‌ ಪ್ರಶ್ನೆ

07:17 PM Jun 20, 2022 | Team Udayavani |

ಬೆಂಗಳೂರು: ಅಗ್ನಿಪಥ ವಿರುದ್ಧ ಹೋರಾಡುತ್ತಿರುವ ಯುವಕರ ಬಗ್ಗೆ ಬಿಜೆಪಿ ನಾಯಕರ ಹೇಳಿಕೆಗಳು ಆ ಪಕ್ಷದ  ಮನೋವಿಕಾರವನ್ನು ಅನಾವರಣ ಮಾಡಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಯೋಜನೆ ಮೂಲಕ ಆಯ್ಕೆಯಾಗಿ ನಿರ್ಗಮಿಸುವ ಅಗ್ನಿವೀರರಿಗೆ ಬಿಜೆಪಿ ಕಚೇರಿಯಲ್ಲಿ  ಭದ್ರತಾ ಸಿಬಂದಿ ಉದ್ಯೋಗ ನೀಡಲು ಆದ್ಯತೆ ನೀಡಲಾಗುವುದು ಎಂದಿರುವ ಬಿಜೆಪಿ ನಾಯಕ ಕೈಲಾಶ್‌ ಹೇಳಿಕೆ ಖಂಡನೀಯ. ಇದು ಯುವ ಸಮುದಾಯ ಮಾತ್ರವಲ್ಲ, ಇಡೀ ಸೈನ್ಯಕ್ಕೆ ಮಾಡಿದ ಅವಮಾನವಾಗಿದೆ ಎಂದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next