Advertisement

Kannada Cinema; ರೈತರ ಸುತ್ತ ‘ದಿಗ್ವಿಜಯ’ ಸಿನಿಮಾ

04:29 PM Sep 21, 2023 | Team Udayavani |

ರೈತರ ಸಮಸ್ಯೆಗಳನ್ನು ತೋರಿಸುವ ಜೊತೆಗೊಂದು ಪರಿಹಾರ ಹೇಳುವ ಅನೇಕ ಸಿನಿಮಾಗಳು ಬಂದಿವೆ. ಈ ಸಾಲಿಗೆ ಈಗ ಹೊಸ ಸೇರ್ಪಡೆ “ದಿಗ್ವಿಜಯ’. ಹೀಗೊಂದು ಚಿತ್ರ ಸದ್ದಿಲ್ಲದೇ ಬಿಡುಗಡೆಹಂತಕ್ಕೆ ಬಂದಿದ್ದು, ಸೆ.22ರಂದು ತೆರೆಕಾಣುತ್ತಿದೆ.

Advertisement

ಇತ್ತೀಚೆಗೆ ಈ ಚಿತ್ರದ ಟ್ರೇಲರ್‌ ಹಾಗೂ ಆಡಿಯೋ ಬಿಡುಗಡೆ ನಡೆಯಿತು. ಈ ಚಿತ್ರವ್ನು ದುರ್ಗಾ ಪಿ.ಎಸ್‌ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡುವ ದುರ್ಗಾ, “ಇದು ನನ್ನ ನಿರ್ದೇಶನದ 5ನೇ ಚಿತ್ರ. ಇತ್ತೀಚೆಗೆ ರೈತರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಪರಿಹಾರದ ಹಣಕ್ಕಾಗಿ ಸೂಸೈಡ್‌ ಮಾಡಿಕೊಳ್ತಿದ್ದಾರೆ ಅನ್ನೋ ರಾಜಕಾರಣಿಗಳ ಹೇಳಿಕೆ ಕೇಳಿ ನನ್ನ ಮನಸಿಗೆ ತುಂಬಾ ನೋವಾಯಿತು. ರೈತರು ಸೂಸೈಡ್‌ ಮಾಡಿಕೊಳ್ಳಲು ವ್ಯವಸ್ಥೆಯಲ್ಲಿನ ಲೋಪವೇ ಕಾರಣ. ಅದನ್ನು ಯಾವ ರೀತಿ ಪರಿಹರಿಸಬಹುದು ಎಂದು ಯೋಚಿಸಿ ಈ ಕಾನ್ಸೆಪ್ಟ್ ಮಾಡಿದ್ದೇನೆ. ರೈತರು ಸಾಲ ಮಾಡಿಕೊಳ್ಳದ ಹಾಗಿರಲು ಏನು ಅನುಕೂಲ ಮಾಡಿಕೊಡಬಹುದು ಎಂದೂ ಹೇಳಿದ್ದೇನೆ. ಸ್ನೇಹಿತ ಶ್ರೀಕಾಂತ ಹಾಗೂ ನಾನು ಸೇರಿ ಸಿನಿಮಾ ನಿರ್ದೇಶನ ಮಾಡಿದ್ದೇವೆ’ ಎಂದು ವಿವರಿಸಿದರು.

ಚಿತ್ರದ ನಾಯಕ ಕಂ ನಿರ್ಮಾಪಕ ಜಯಪ್ರಭು ಮಾತನಾಡಿ, “ಇದು ಕಂಟೆಂಟ್‌ ಜೊತೆ ಕಮರ್ಷಿಯಲ್‌ ಎಲಿಮೆಂಟ್‌ ಇರುವ ಚಿತ್ರ. ಸಿನಿಮಾ ಮೂಲಕ ಜನರಿಗೆ ಏನಾದರೂ ಹೇಳಬೇಕೆಂದು ಈ ಸಿನಿಮಾ ಮಾಡಿದ್ದೇವೆ. ಚಿತ್ರದಲ್ಲಿ ನಾನೊಬ್ಬ ಪತ್ರಕರ್ತ, ಆತ ಐಡಿಯಾ ಮಾಡಿ 48 ಗಂಟೆಗಳಲ್ಲಿ ಹೇಗೆ ರೈತರ ಸಾಲ ಮನ್ನಾ ಮಾಡಿಸಿದ ಎಂದು ಚಿತ್ರದಲ್ಲಿ ತೋರಿಸಿದ್ದೇವೆ ‘ಎಂದರು.

ಈ ಚಿತ್ರವನ್ನು ಜೆ.ಪಿ. ಎಂರ್ಟರ್‌ ಟೈನ್ಮೆಂಟ್‌ನಡಿ ಜಯಪ್ರಭು ಆರ್‌. ಲಿಂಗಾಯತ್‌, ಅರುಣ್‌ ಸುಕದರ್‌ ಹಾಗೂ ಹರೀಶ್‌ ಆರ್‌.ಸಿ. ನಿರ್ಮಿಸಿದ್ದಾರೆ. ಚಿತ್ರದಲ್ಲಿ ಜಯಪ್ರಭು, ಸ್ನೇಹ, ಸುಚೇಂದ್ರ ಪ್ರಸಾದ್‌, ದುಬೈ ರಫೀಕ್‌, ಪಟ್ರೆ ನಾಗರಾಜ್‌, ಕಿಲ್ಲರ್‌ ವೆಂಕಟೇಶ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next