Advertisement

ಕಡ್ಡಿ ಅಲ್ಲಾಡ್ಸೋ ಚಡ್ಡಿದೋಸ್ತ್!ಹೀಗೊಂದು ಭಿನ್ನ ಶೀರ್ಷಿಕೆ ಚಿತ್ರಕ್ಕೆ ತಯಾರಿ

08:27 AM Aug 12, 2019 | Suhan S |

ಕೆಲವು ಸಿನಿಮಾಗಳೇ ಹಾಗೆ, ಅವು ತಮ್ಮ ಚಿತ್ರದ ಕಥಾಹಂದರ, ಸಬ್ಜೆಕ್ಟ್ಗಳಿಂದ ಸುದ್ದಿಯಾಗುವುದಕ್ಕಿಂತ ತಮ್ಮ ಟೈಟಲ್ ಮೂಲಕವೇ ಸುದ್ದಿಯಾಗೋದು ಜಾಸ್ತಿ. ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲ ವರ್ಷಗಳಿಂದ ತಮ್ಮ ಚಿತ್ರಕ್ಕೆ ವಿಚಿತ್ರ ಟೈಟಲ್ಗಳನ್ನ ಇಟ್ಟು ಗಮನ ಸೆಳೆಯುವ ಟ್ರಿಕ್ಸ್‌ ಜೋರಾಗಿಯೇ ನಡೆಯುತ್ತಿದೆ. ಈಗ ಯಾಕೆ ಈ ಟೈಟಲ್ ಟ್ರಿಕ್ಸ್‌ ಬಗ್ಗೆ ಮಾತು ಅಂತೀರಾ..? ಅದಕ್ಕೂಂದು ಕಾರಣವಿದೆ. ಕನ್ನಡದಲ್ಲಿ ಸದ್ಯ ಅಂಥದ್ದೇ ವಿಚಿತ್ರ ಟೈಟಲ್ ಇಟ್ಟುಕೊಂಡು ಚಿತ್ರವೊಂದು ಶುರುವಾಗಿದೆ. ಅಂದಹಾಗೆ, ಆ ಚಿತ್ರದ ಹೆಸರು ‘ಚಡ್ಡಿ ದೋಸ್ತ್, ಕಡ್ಡಿ ಅಲ್ಲಾಡುಸ್ಬುಟ್ಟಾ’.

Advertisement

ಈ ಹಿಂದೆ ‘ಮನಸಿನ ಮರೆಯಲಿ’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದ ಆಸ್ಕರ್‌ ಕೃಷ್ಣ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಕೆಲ ತಿಂಗಳ ಹಿಂದೆ ತೆರೆಕಂಡಿದ್ದ ‘ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು’ ಚಿತ್ರವನ್ನು ನಿರ್ದೇಶಿಸಿದ್ದ ಲೋಕೇಂದ್ರ ಸೂರ್ಯ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರದಲ್ಲಿ ಸ್ನೇಹ, ಪ್ರೀತಿ, ರಾಜಕೀಯ, ಕ್ರೈಂ ಮತ್ತು ಪೋಲೀಸ್‌ ವ್ಯವಸ್ಥೆ ಮುಂತಾದ ಅಂಶಗಳು ಹೇಗೆ ಒಂದಕ್ಕೊಂದು ಹೇಗೆ ಬೆಸೆದುಕೊಂಡಿರುತ್ತವೆ ಎಂಬುದನ್ನು ತೋರಿಸಲಾಗುತ್ತದೆಯಂತೆ.

ಒಟ್ಟಾರೆ ಕಳೆದ ಆರು ತಿಂಗಳಿನಿಂದ ‘ಚಡ್ಡಿ ದೋಸ್ತ್, ಕಡ್ಡಿ ಅಲ್ಲಾಡುಸ್ಬುಟ್ಟಾ’ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಕಾಮಿಡಿ ಕಂ ಕ್ರೈಂ-ಥ್ರಿಲ್ಲರ್‌ ಕಥಾಹಂದರದ ಈ ಚಿತ್ರದಲ್ಲಿ ಎರಡು ಪ್ರಮುಖ ಪಾತ್ರಗಳನ್ನು ಆಸ್ಕರ್‌ ಕೃಷ್ಣ ಮತ್ತು ಲೋಕೇಂದ್ರ ಸೂರ್ಯ ಅವರೇ ನಿರ್ವಹಿಸುತ್ತಿ ದ್ದಾರೆ. ಸದ್ಯ ‘ಚಡ್ಡಿ ದೋಸ್ತ್’ಗಳ ಚಿತ್ರದ ಬಗ್ಗೆ ಯಾರಾದ್ರೂ ‘ಕಡ್ಡಿ ಅಲ್ಲಾಡುಸ್ಬುಟಾ’ರು ಅನ್ನೋ ಕಾರಣಕ್ಕೆ ಚಿತ್ರದ ಬಗ್ಗೆ ಹೆಚ್ಚೇನು ‘ಗುಟ್ಟು’ ಬಿಟ್ಟುಕೊಡದ ಚಿತ್ರತಂಡ, ಎಲ್ಲವನ್ನೂ ತೆರೆಮೇಲೆ ಹೇಳುತ್ತೇವೆ ಎನ್ನುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next