Advertisement

ಮೀನುಗಾರರಿಗೆ ಡೀಸೆಲ್‌ ಸಬ್ಸಿಡಿ, ಪರಿಹಾರಕ್ಕೆ ಸಭಾಪತಿ ಆಗ್ರಹ

07:41 AM May 25, 2020 | mahesh |

ಉಡುಪಿ: ಬಿಜೆಪಿ ಸರಕಾರ ರಾಜ್ಯದ ಮೀನುಗಾರರನ್ನು ಅವಗಣನೆ ಮಾಡಿದ್ದು, ಕೋವಿಡ್ ಲಾಕ್‌ಡೌನ್‌ನಿಂದ ಆಗಿರುವ ತೀವ್ರ ನಷ್ಟಕ್ಕೆ ಯಾವುದೇ ಪರಿಹಾರ ನೀಡದೆ ಇರುವುದಕ್ಕೆ ಅಖೀಲ ಭಾರತ ಮೀನುಗಾರ ಕಾಂಗ್ರೆಸ್‌ ಸಮಿತಿ ನಾಯಕ ಯು.ಆರ್‌. ಸಭಾಪತಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

Advertisement

ಮೀನುಗಾರರಿಗೆ ಸಲ್ಲಬೇಕಾಗಿರುವ ಡೀಸೆಲ್‌ ಸಬ್ಸಿಡಿಯನ್ನೂ ಬಿಡುಗಡೆಗೊಳಿಸಿಲ್ಲ. ಕೊರೊನಾ ಲಾಕ್‌ಡೌನ್‌ ಸಮ ಯದ ಮೀನುಗಾರರ ಸಾಲದ 3 ಕಂತುಗಳನ್ನು ಬಡ್ಡಿ ಸಮೇತ ಮನ್ನಾ ಮಾಡುವಂತೆ ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಶಿಫಾರಸು ಮಾಡಬೇಕು. ಅಲ್ಲದೆ ಮೀನುಗಾರ ಮಹಿಳೆಯರು, ಮೀನುಗಾರ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್‌ ಟಾಸ್ಕ್ಫೋರ್ಸ್‌ ಸಮಿತಿ ಅಧ್ಯಕ್ಷ ಯು.ಆರ್‌. ಸಭಾಪತಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next