Advertisement

ಪಾಲಿಕೆಯಿಂದ ಉಚಿತ ಮಧುಮೇಹ ಶಿಬಿರ

10:28 AM Nov 15, 2021 | Team Udayavani |

ಬೆಂಗಳೂರು: ವಿಶ್ವಮಧುಮೇಹ ದಿನದ ಅಂಗವಾಗಿ ಭಾನುವಾರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಧುಮೇಹ ಕುರಿತ ಆರೋಗ್ಯ ಶಿಬಿರ ಮತ್ತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

Advertisement

ಪಾಲಿಕೆ ವ್ಯಾಪ್ತಿಯ ವಿವಿಧ ಆರೋಗ್ಯ ಕೇಂದ್ರಗಳು ಹಾಗೂ ಲಾಲ್‌ ಬಾಗ್‌ ಮತ್ತು ಕಬ್ಬನ್‌ ಪಾರ್ಕ್‌ನಲ್ಲಿ ನಡೆದ ಆರೋಗ್ಯ ಶಿಬಿರದಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಕಬ್ಬನ್‌ ಪಾರ್ಕ್‌ನಲ್ಲಿ ಮುಂಜಾನೆ ವಾಯು ವಿಹಾರ ಮಾಡಲು ಬಂದವರಿಗೆ ಆರೋಗ್ಯ ಶಿಬಿರವನ್ನು ಹಾಗೂ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು.

ಇದನ್ನೂ ಓದಿ:- ಎಂ.ವೆಂಕಯ್ಯನಾಯ್ಡುಗೆ ರಾಜ್ಯಪಾಲರಿಂದ ಸ್ವಾಗತ

ಈ ವೇಳೆ ಒಟ್ಟು 768 ಜನರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಅದರಲ್ಲಿ 161 ಮಧುಮೇಹ ಪ್ರಕರಣ ಮತ್ತು 134 ಅಧಿಕ ರಕ್ತದೊತ್ತಡ ಪ್ರಕರಣಗಳು ಪತ್ತೆಯಾಗಿದ್ದು, ಹೊಸದಾಗಿ ಪತ್ತೆಯಾದ ಎಲ್ಲಾ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next