Advertisement

ನಟ ಭಯಂಕರನಿಗೆ ಧ್ರುವ ಸರ್ಜಾ ಸಾಥ್‌

09:48 AM Mar 28, 2020 | Suhan S |

ಬಿಗ್‌ಬಾಸ್‌ ಖ್ಯಾತಿಯ ನಟ ಪ್ರಥಮ್‌ ಅಭಿನಯದ “ನಟ ಭಯಂಕರ’ ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್ಸ್‌ ಅಂತಿಮ ಹಂತದಲ್ಲಿರುವ “ನಟ ಭಯಂಕರ’ ಚಿತ್ರಕ್ಕೆ ಈಗ ನಟ ಧ್ರುವ ಸರ್ಜಾ ಸಾಥ್‌ ನೀಡಿದ್ದಾರೆ. “ನಟ ಭಯಂಕರ’ ಚಿತ್ರಕ್ಕೆ ನಟ ಧ್ರುವ ಸರ್ಜಾ ಹಿನ್ನೆಲೆ ಧ್ವನಿಯನ್ನು ನೀಡಿದ್ದು, ಇತ್ತೀಚೆಗೆ ಅಬ್ಟಾಯಿ ನಾಯ್ಡ್ ಸ್ಟುಡಿಯೋದಲ್ಲಿ ಈ ರೆಕಾರ್ಡಿಂಗ್‌ ಕಾರ್ಯ ನಡೆಸಲಾಗಿದೆ.

Advertisement

“ನಟ ಭಯಂಕರ’ನಿಗೆ ಹಿನ್ನೆಲೆ ಧ್ವನಿ ನೀಡಿದ ಬಳಿಕ ಮಾತನಾಡಿದ ಧ್ರುವ ಸರ್ಜಾ, “ಪ್ರಥಮ್‌ ಅವರ ಶೈಲಿಯಲ್ಲಿ ಈ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ನೋಡುಗರಿಗೆ ಒಂದಷ್ಟು ಮನರಂಜನೆಯಂತೂ ಸಿನಿಮಾ ಕೊಡುತ್ತದೆ. ಇಡೀ ಚಿತ್ರತಂಡಕ್ಕೆ ಪರಿಶ್ರಮಕ್ಕೆ ಒಳ್ಳೆಯ ಫ‌ಲ ಸಿಗಲಿ. ಸಿನಿಮಾ ಚೆನ್ನಾಗಿ ಓಡಲಿ. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭ ಕೋರಿದರು. ಇನ್ನು “ನಟ ಭಯಂಕರ’ ಚಿತ್ರಕ್ಕೆ ಧ್ರುವ ಸರ್ಜಾ ಹಿನ್ನೆಲೆ ಧ್ವನಿ ನೀಡಿರುವುದಕ್ಕೆ ಯಾವುದೇ ಸಂಭಾವನೆ ಯನ್ನೂ ತೆಗೆದು ಕೊಂಡಿಲ್ಲವಂತೆ. ಈ ಬಗ್ಗೆ ಮಾತನಾಡುವ ನಟ ಪ್ರಥಮ್‌, “ಚಿತ್ರತಂಡದ ಮೇಲಿನ ಪ್ರೀತಿ ಯಿಂದ ನಟ ಧ್ರುವ ಸರ್ಜಾ ಚಿತ್ರಕ್ಕೆ ಹೆಗಲು ನೀಡಿದ್ದಾರೆ. ಚಿತ್ರತಂಡದ ಕೋರಿಕೆಯ ಮೇರೆಗೆ ಬಿಡುವು ಮಾಡಿಕೊಂಡು ಬಂದು ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಆದರೆ ಧ್ರುವ ತಾವು ನೀಡಿರುವ ಹಿನ್ನೆಲೆ ಧ್ವನಿಗೆ ಯಾವುದೇ ಸಂಭಾವನೆ ಯನ್ನೂ ಪಡೆದಿಲ್ಲ. ಹಾಗಾಗಿ ಆ ಸಂಭಾವನೆಯ ಮೊತ್ತವನ್ನು ಬೇಸಿಗೆಯಲ್ಲಿ ಗೋವುಗಳ ಪಾಲನೆಗೆ ತೆರೆಯಲಾಗಿರುವ ಗೋಶಾಲೆಗಳಿಗೆ ನೀಡಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ.

“ಎಲ್ಲ ಅಂದುಕೊಂಡಂತೆ ನಡೆದಿದ್ದರೆ, ಇದೇ ಏಪ್ರಿಲ್‌ ವೇಳೆಗೆ “ನಟ ಭಯಂಕರ’ ತೆರೆಗೆ ತರುವ ಆಲೋಚನೆಯಿತ್ತು. ಆದ್ರೆ ಸದ್ಯ ಕೋವಿಡ್ 19 ಭೀತಿ ಎಲ್ಲೆಡೆ ಇರುವುದರಿಂದ, ಚಿತ್ರರಂಗದಲ್ಲೂ ಅನಿಶ್ಚಿತತೆ ಮುಂದುವರೆ ದಿರುವುದರಿಂದ, ಸ್ವಲ್ಪ ಮಟ್ಟಿಗೆ ವಾತಾವರಣ ತಿಳಿಯಾದ ಬಳಿಕ ಸಿನಿಮಾವನ್ನು ತೆರೆಗೆ ತರುವ ಆಲೋಚನೆ ಇದೆ’ ಎನ್ನುವುದು ನಟ ಪ್ರಥಮ್‌ ಮಾತು. ಚಿತ್ರದಲ್ಲಿ ಸುಶ್ಮಿತಾ ಜೋಶಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ­

Advertisement

Udayavani is now on Telegram. Click here to join our channel and stay updated with the latest news.

Next