Advertisement

“ಚಿರು ನೀ ಇಲ್ಲದೆ ಇರಲು ಸಾಧ್ಯವಾಗುತ್ತಿಲ್ಲ”: ಅಣ್ಣನ ನೆನೆದು ಭಾವುಕರಾದ ಧ್ರುವ ಸರ್ಜಾ  

06:24 PM Sep 12, 2021 | Team Udayavani |

ಬೆಂಗಳೂರು: ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಅವರು ಅಗಲಿದ ತಮ್ಮ ಅಣ್ಣ ಚಿರಂಜೀವಿ ಸರ್ಜಾ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ.

Advertisement

ಚಂದನವನದ ಚೆಂದದ ಸಹೋದರರು ಎಂದೇ ಖ್ಯಾತಿ ಪಡೆದಿದ್ದ ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಒಳ್ಳೆಯ ಸ್ನೇಹಿತರಂತಿದ್ದರು. ಅಣ್ಣನ ಸಿನಿಮಾ ಮುಹೂರ್ತಗಳಿಗೆ ತಮ್ಮ ಧ್ರುವ ಸರ್ಜಾ ಬಂದು ಹಾರೈಸುತ್ತಿದ್ದರು. ಅದರಂತೆ ತಮ್ಮನ ಸಿನಿಮಾಗಳಿಗೆ ಅಣ್ಣನು ಶುಭ ಕೋರುತ್ತಿದ್ದರು. ಮನೆಯಲ್ಲಿಯೂ ಅನ್ಯೋನ್ಯವಾಗಿದ್ದ ಈ ಸಹೋದರರು ಇತರರಿಗೆ ಮಾದರಿಯಂತಿದ್ದರು. ಆದರೆ, ಚಿರಂಜೀವಿ ಸರ್ಜಾ ಅಕಾಲಿಕ ನಿಧನಕ್ಕೆ ತುತ್ತಾದರು. ಅಣ್ಣನನ್ನು ಕಳೆದುಕೊಂಡ ಧ್ರುವ ಸರ್ಜಾ ಇನ್ನೂ ಆ ನೋವಿನಿಂದ ಹೊರ ಬಂದಿಲ್ಲ.

ಧ್ರುವ ಸರ್ಜಾ ಅವರಿಗೆ ಇಂದು ಅಗಲಿದ ತಮ್ಮ ಅಣ್ಣನ ನೆನಪು ಕಾಡಿದೆ. ಅಣ್ಣನ ಜೊತೆ ಕಳೆದ ಕ್ಷಣಗಳ ಫೋಟೊಗಳ ವಿಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ನಿನ್ನನ್ನು ತುಂಬಾ ಮಿಸ್ ಮಾಡ್ಕೋತಿದಿನಿ ಚಿರು. ನೀ ಇಲ್ಲದೆ ಇರಲು ಸಾಧ್ಯವಾಗುತ್ತಿಲ್ಲ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಚಿರಂಜೀವಿ ಅವರ ಸಾವು ಸರ್ಜಾ ಕುಟುಂಬಕ್ಕೆ ಬರಸಿಡಿಲು ಬಡಿದಂತಾಯಿತು. ಪತಿಯನ್ನು ಕಳೆದುಕೊಂಡ ಸಂದರ್ಭದಲ್ಲಿ ಚಿರು ಪತ್ನಿ ಮೇಘನಾ ರಾಜ್ ಗರ್ಭವತಿಯಾಗಿದ್ದರು. ಪತಿಯ ಅಗಲಿಕೆಯ ಕೆಲವು ತಿಂಗಳ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದರು. ಮಗುವಿನ ಮುಖ ನೋಡಿ ಚಿರು ಅಗಲಿಕೆಯ ನೋವು ಮರೆಯಲು ಈ ಕುಟುಂಬ ಪ್ರಯತ್ನಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next