Advertisement

ಡೋಣಿ  ನದಿ ಹೂಳು ತೆರವಿಗೆ ಕ್ರಮ: ನಡಹಳ್ಳಿ

09:10 PM Nov 13, 2020 | Suhan S |

ತಾಳಿಕೋಟೆ: ಡೋಣಿ ನದಿಯಲ್ಲಿ ತುಂಬಿಕೊಳ್ಳುತ್ತಾಬಂದಿರುವ ಹೂಳು ಮತ್ತು ಮುಳ್ಳುಕಂಠಿಗಳನ್ನು ತೆರವುಗೊಳಿಸಿ ಪ್ರವಾಹದಿಂದ ರೈತರಿಗಾಗುತ್ತಿರುವ ತೊಂದರೆ ನಿವಾರಿಸಲು ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷ ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ಹೇಳಿದರು.

Advertisement

ಪಟ್ಟಣಕ್ಕೆ ಹೊಂದಿಕೊಂಡು ಹರಿಯುತ್ತಿರುವ ಡೋಣಿ ನದಿ ಯಲ್ಲಿ ಬೆಳೆದಿರುವ ಮುಳ್ಳುಕಂಠಿ ಹಾಗೂ ಹೂಳನ್ನು ಪರಿಶೀಲಿಸಿದ ಅವರು, ತಾಳಿಕೋಟೆ ವ್ಯಾಪ್ತಿಯಲ್ಲಿ ಡೋಣಿ ನದಿ ಪ್ರವಾಹ ಬಂದಾಗಲೆಲ್ಲಾ ಬೊಮ್ಮನಹಳ್ಳಿಗ್ರಾಮದಿಂದ ಬೋಳವಾಡ, ತಾಳಿಕೋಟೆ, ಹರನಾಳ  ಗ್ರಾಮದವರೆಗೆ ಸುಮಾರು 500ರಿಂದ 600 ಎಕರೆ ರೈತರ ಜಮೀನುಗಳು ಹಾಳಾಗುತ್ತಾ ಸಾಗಿವೆ. ಇದಕ್ಕೊಂದುಪರಿಹಾರ ಕಂಡುಕೊಳ್ಳಬೇಕೆಂದು ನಾನು ಮತ್ತು ಕೆಬಿಜೆಎನ್‌ ಎಲ್‌ ಟೆಕ್ನಿಕಲ್‌ ಸ್ಪೇಷಾಲಿಸ್ಟ್‌ ತಾಳಿಕೋಟೆಯ ಸುಧೀರ ಸಜ್ಜನಅವರಿಗೆ ಹೇಳಿದ್ದೇನೆ. ಅವರು ಈ ಪ್ರವಾಹ ಹಾನಿ ತಪ್ಪಿಸಲು ಏನು ಮಾಡಲಿಕ್ಕೆ ಅವಕಾಶಗಳಿವೆ ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.

ಪರಂ ಶಿವಯ್ಯ ವರದಿಯಲ್ಲಿ ಒಂದು ರಿಪೋರ್ಟ್‌ ಕೂಡಾ ಈಗಾಗಲೇ ಆಗಿದೆ. ಈ ಮುಳ್ಳುಕಂಠಿ ಮತ್ತು ಹೂಳು ತೆಗೆಸಬೇಕು. ಡೋಣಿ ಹತ್ತಿರ ಹಳೆಯ ಬ್ರಿಜ್‌ ಇದೆ. ಅದನ್ನು ತೆರವುಗೊಳಿಸಿದರೆ ರೈತರ ಹೊಲಗಳಿಗೆ ಪ್ರವಾಹ ನುಗ್ಗುವುದನ್ನು ತಡೆಯಬಹುದೆಂಬ ಸಲಹೆ ಕೊಟ್ಟಿದ್ದೇನೆ. ಅದರ ಪ್ರಕಾರ ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರ ಗಮನಕ್ಕೆ ತರಲಾಗುವುದು. ಈ ಕುರಿತು ಸರ್ಕಾರದಿಂದ ಅನುಮತಿ ಪಡೆದು ಮುಂದಿನ ದಿನಗಳಲ್ಲಿ ಈ ಕೆಲಸವನ್ನು ಪೂರ್ಣಗೊಳಿಸುವಂತಹ ಕೆಲಸ ಮಾಡುತ್ತೇನೆಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ವಾಸುದೇವ ಹೆಬಸೂರ, ರಾಜುಗೌಡ ಗುಂಡಕನಾಳ, ತಾಪಂ ಅಧ್ಯಕ್ಷ ರಾಜುಗೌಡ ಕೊಳೂರ, ಎಂ.ಎಂ. ಪಾಟೀಲ, ಈಶ್ವರ ಹೂಗಾರ, ಮುದಕಣ್ಣ ಬಡಿಗೇರ, ತಾಲೂಕು ತಹಶೀಲ್ದಾರ್‌ ಅನಿಲಕುಮಾರ ಢವಳಗಿ, ಪಿಎಸ್‌ಐ ಜಿ.ಜಿ. ಬಿರಾದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next