Advertisement

Dharwad Crime: ಕ್ಷುಲ್ಲಕ ಕಾರಣಕ್ಕೆ ವೈಟರ್‌ ನಿಂದ ಕುಕ್ ಕೊಲೆ

02:41 PM Feb 07, 2024 | Team Udayavani |

ಧಾರವಾಡ: ಇಲ್ಲಿಯ ಹೋಟೆಲ್‌ವೊಂದರಲ್ಲಿನ ಕುಕ್ ಆಗಿದ್ದ ವ್ಯಕ್ತಿಯನ್ನು ಅದೇ ಹೋಟೆಲ್‌ನ ವೈಟರ್‌ ಆಗಿ ಕೆಲಸ ಮಾಡುತ್ತಿದ್ದವನು ರಾಡ್‌ನಿಂದ ಹೊಡೆದು ಕೊಲೆ ಮಾಡಿದ ಘಟನೆ ಫೆ. 7ರ ಬುಧವಾರ ಬೆಳಗಿನ ಜಾವ ಸಂಭವಿಸಿದೆ.

Advertisement

ದಾಂಡೇಲಿ ಮೂಲದ ಕನಯ್ಯ ಎಂಬ ವ್ಯಕ್ತಿ ಹೋಟೆಲ್‌ವೊಂದರಲ್ಲಿ ಕುಕ್ ಆಗಿದ್ದ. ಶಿರಹಟ್ಟಿ ತಾಲೂಕಿನ ಸುಗನಳ್ಳಿ ಗ್ರಾಮದ ಫಕ್ಕೀರೇಶ ಪ್ಯಾಟಿ (40) ಎಂಬಾತನನ್ನು ರಾಡ್‌ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಭೋವಿ ಗಲ್ಲಿಯ ಹೋಟೆಲ್‌ನ ರೂಮ್‌ನಲ್ಲಿದ್ದ ಈ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಈ ಹತ್ಯೆ ನಡೆದಿದೆ.

ಕಳೆದ ಮೂರು ದಿನಗಳಿಂದ ಮೂರು ಕೊಲೆಗಳಾಗಿದ್ದು, ಇವೆಲ್ಲವೂ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದರೆ, ಇದೀಗ ನಗರದಲ್ಲಿ ನಾಲ್ಕನೇ ಕೊಲೆಯು ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಶಹರ ಠಾಣೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next