Advertisement

Dharwad; ಖೈದಿಗಳ ಮಧ್ಯೆ ಮಾರಾಮಾರಿ,ಇರಿತ: ಓರ್ವನಿಗೆ ಗಾಯ

10:11 PM Feb 17, 2024 | Team Udayavani |

ಧಾರವಾಡ: ಇಬ್ಬರು ಖೈದಿಗಳ ಮಧ್ಯೆ ನಡೆದ ಮಾರಾಮಾರಿಯಲ್ಲಿ ಓರ್ವ ಖೈದಿಗೆ ಚಾಕು ಇರಿದ ಘಟನೆ ನಗರದ ಕೇಂದ್ರ ಕಾರಾಗೃಹದಲ್ಲಿ ಶನಿವಾರ ನಡೆದಿದೆ.

Advertisement

ತಮಿಳುನಾಡು ಮೂಲದ ಸುಲೇಮಾನ್ ಇರಿತಕ್ಕೆ ಒಳಗಾದ ಖೈದಿ. ಪ್ರಶಾಂತ ಅಲಿಯಾಸ್ ಪಚ್ಚಿ ಹಲ್ಲೆ ಮಾಡಿರುವ ಖೈದಿ. ಉಡುಪಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಆರೋಪ ಸಾಬೀತಾದ ಹಿನ್ನಲೆ ಪ್ರಶಾಂತ ಜೀವಾವಧಿ ಶಿಕ್ಷೆಗೆ ಒಳಗಾಗಿ, ಕೇಂದ್ರ ಕಾರಾಗೃಹ ಸೇರಿದ್ದಾನೆ.

ಟೈಲ್ಸ್ ಕಲ್ಲು ಚಾಕು ರೀತಿ ಬಳಸಿ ಕ್ಷುಲ್ಲಕ ಕಾರಣಕ್ಕೆ ಸುಲೇಮಾನ್ ಮೇಲೆ ಹಲ್ಲೆ ನಡೆಸಿದ್ದು, ಗಾಯಾಳು ಖೈದಿಗೆ ಕಾರಾಗೃಹದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪ್ರಶಾಂತ ಈ ಹಿಂದೆಯೂ ಕೆಲವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next