Advertisement

ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಸ್ವಚ್ಛತಾ ಅಭಿಯಾನ

03:24 PM Jan 13, 2022 | Team Udayavani |

ಸುರಪುರ: ಸ್ವಚ್ಛತೆ ನಮ್ಮ ಮೂಲ ಮಂತ್ರವಾಗಬೇಕು. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಹಾಗೆ ಮಠ-ಮಂದಿರಗಳನ್ನು ಕೂಡಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದವರ ಶ್ರದ್ಧಾ ಕೇಂದ್ರಗಳ ಸ್ವಚ್ಛತೆ ಕೈಗೆತ್ತಿಕೊಂಡಿರುವ ಕಾರ್ಯ ಇತರೆ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಹೇಳಿದರು.

Advertisement

ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನದಲ್ಲಿ ಅವರು ಮಾತನಾಡಿ, ಶುಚಿತ್ವ ದೇವರ ಪ್ರಸನ್ನತೆಗೆ ಪ್ರಮುಖ ಕಾರಣವಾಗಿದೆ. ಶ್ರದ್ಧಾ ಕೇಂದ್ರಗಳು ಸ್ವತ್ಛವಾಗಿದ್ದು, ಬರುವ ಭಕ್ತರಿಗೆ ಆನಂದ ನೀಡುವಂತಿರಬೇಕು. ಇದರಿಂದ ಮನಸ್ಸಿಗೆ ಒಂದಿಷ್ಟು ಆನಂದ, ನೆಮ್ಮದಿ ಉಂಟಾಗಿ ಭಕ್ತನೊಲುಮೆಗೆ ನೆರವಾಗುತ್ತದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪ್ರಾದೇಶಿಕ ನಿರ್ದೇಶಕ ಶಿವುರಾಯ ಪ್ರಭು ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಪ್ರಧಾನ ಅರ್ಚಕ ಆಂಜನೇಯಚಾರ್ಯ ಸಾನ್ನಿಧ್ಯ ವಹಿಸಿದ್ದರು. ಸಂತೋಷ, ಎ. ಕಮಲಾಕರ, ರಾಘವೇಂದ್ರ ಭಕ್ರಿ, ಕ್ಷೀರಲಿಂಗಯ್ಯ ಹಿರೇಮಠ, ನಾಗರಾಜ ನ್ಯಾಮತಿ, ಪರುಶುರಾಮ ಮಲ್ಲಿಭಾವಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next