Advertisement

ಮಲ್ಪೆ: ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾತನಿಗೆ ಧರ್ಮದೇಟು

09:58 PM May 21, 2023 | Team Udayavani |

ಮಲ್ಪೆ: ಕಲ್ಮಾಡಿ ಸೇತುವೆಯ ಬಳಿ ವ್ಯಕ್ತಿಯೊಬ್ಬರ ಕಿವಿ ಕಚ್ಚಿ, ಹಲ್ಲೆ ಮಾಡಿ ಗಾಯಗೊಳಿಸಿದ ಒಡಿಶಾ ಮೂಲದ ಮಾನಸಿಕ ಆಸ್ವಸ್ಥನಿಗೆ ಸಾರ್ವಜನಿಕರು ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಾರೆ.

Advertisement

ಮಲ್ಪೆಯಲ್ಲಿ ಕಳೆದ ಕೆಲವು ದಿನಗಳಿಂದ ಕುಡಿದ ಅಮಲಿನಲ್ಲಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದು, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಮಲ್ಪೆ ಬಸ್‌ ನಿಲ್ದಾಣದಲ್ಲಿ ನಿಂತಿದ್ದವರ ಹಲ್ಲೆ ಮಾಡುತ್ತಿದ್ದ ಈತನಿಂದಾಗ ಜನರು ಆತಂಕಕ್ಕೆ ಒಳಗಾಗಿದ್ದರು. ರವಿವಾರ ಕಲ್ಮಾಡಿ ಬಳಿ ಏಕಾಏಕಿ ಹಲ್ಲೆ ನಡೆಸಿದ್ದರಿಂದ ಸಾರ್ವಜನಿಕರು ಆತನನ್ನು ಹಿಡಿದು ಕೈಕಾಲು ಕಟ್ಟಿ ಏಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next