Advertisement

ಮುದ್ರಣಾಲಯ ಮಾಲೀಕರಿಗೆ ನೀತಿಪಾಠ

11:07 AM Feb 23, 2019 | Team Udayavani |

ಧಾರವಾಡ: ಚುನಾವಣೆಗಾಗಿ ಮಾದರಿ ನೀತಿ ಸಂಹಿತೆ ಜಾರಿಯಾದ ಮೇಲೆ ಯಾವುದೇ ಅಭ್ಯರ್ಥಿ, ಪಕ್ಷಗಳ ಕುರಿತು ಪ್ರಚಾರ ಸಾಮಗ್ರಿಗಳನ್ನು ಮುದ್ರಿಸುವ ಮೊದಲು ಮುದ್ರಣಾಲಯ ಮಾಲೀಕರಿಗೆ ಮಾದರಿ ನೀತಿ ಸಂಹಿತೆ ಬಗ್ಗೆ ಎಚ್ಚರವಿರಬೇಕು ಎಂದು ಡಿಸಿ ದೀಪಾ ಚೋಳನ್‌ ಹೇಳಿದರು.

Advertisement

ಡಿಸಿ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮುದ್ರಣಗಳ ಬಗ್ಗೆ ತಿಳಿವಳಿಕೆ ನೀಡಲು ಆಯೋಜಿಸಿದ್ದ ಜಿಲ್ಲೆಯ ಮುದ್ರಣಾಲಯಗಳ ಮಾಲೀಕರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುದ್ರಿಸಿದ ಬಗ್ಗೆ ಪ್ರತಿನಿತ್ಯ ತಪ್ಪದೇ ಅನುಬಂಧ “ಎ’ ಮತ್ತು “ಬಿ’ಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ನೋಡಲ್‌ ಅಧಿಕಾರಿಗೆ ಮಾಹಿತಿ ಸಲ್ಲಿಸಬೇಕು. ಮುದ್ರಣಾಲಯದಲ್ಲಿ ಚುನಾವಣೆಗೆ ಸಂಬಂ ಧಿಸಿದಂತೆ ಮುದ್ರಿಸುವ ಪ್ರತಿಯೊಂದು ಪ್ರಚಾರ ಸಾಮಗ್ರಿಯಲ್ಲಿ ಮುದ್ರಕರ ಹಾಗೂ ಪ್ರಕಾಶಕರ ಹೆಸರು, ವಿಳಾಸ ಮತ್ತು ಮುದ್ರಿಸಿದ ಪ್ರತಿಗಳ ಸಂಖ್ಯೆ ಕಡ್ಡಾಯವಾಗಿ ನಮೂದಿಸಿರಬೇಕು ಎಂದು ಸೂಚಿಸಿದರು.

ತಪ್ಪು ಮಾಹಿತಿ ಕೊಟ್ಟರೆ ಜೋಕೆ: ಮಾದರಿ ನೀತಿ ಸಂಹಿತೆ ನೋಡಲ್‌ ಅಧಿಕಾರಿಯಾಗಿರುವ ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಮುದ್ರಣಾಲಯಗಳ ಮಾಲೀಕರು ಪ್ರಚಾರ ಸಾಮಗ್ರಿ ಮುದ್ರಿಸಿದ ಬಗ್ಗೆ ತಪ್ಪು ಮಾಹಿತಿ ನೀಡಿದರೆ ಶಿಕ್ಷೆ ಮತ್ತು ದಂಡ ಎರಡೂ ಆಗುತ್ತದೆ ಎಂದರು.

ಮುದ್ರಣದ ಬಗ್ಗೆ ಮಾರುಕಟ್ಟೆ ದರಗಳನ್ನು ಶೀಘ್ರದಲ್ಲಿ ಜಿಲ್ಲಾ ಚುನಾವಣಾ ಧಿಕಾರಿಗಳು ನೀಡುತ್ತಾರೆ. ಆ ದರಗಳಿಗೆ ಅನುಗುಣವಾಗಿ ಅಭ್ಯರ್ಥಿ, ಪಕ್ಷಗಳಿಗೆ ಬಿಲ್‌ ನೀಡಬೇಕು. ಅಭ್ಯರ್ಥಿಗಳು ಪಡೆಯುವ ಬಿಲ್‌ಗ‌ಳಿಗೆ ಅವರು
ಚುನಾವಣೆಗಾಗಿ ನಾಮಪತ್ರದೊಂದಿಗೆ ಪ್ರತ್ಯೇಕ ಬ್ಯಾಂಕ್‌ ಖಾತೆ ವಿವರ ಸಲ್ಲಿಸಿರುತ್ತಾರೆ. ಆ ಖಾತೆ ಮೂಲಕವೇ ಹಣ ಪಡೆಯಬೇಕು. 20 ಸಾವಿರ ರೂ.ಗಿಂತ ಹೆಚ್ಚು ಬಿಲ್‌ಗ‌ಳಿದ್ದರೆ ಚೆಕ್‌ ಅಥವಾ ಡಿಡಿ ಮುಖಾಂತರ ಭರಿಸಿಕೊಳ್ಳಬೇಕು. ಚುನಾವಣೆಗೆ ಸಂಬಂಧಿತ ಖರ್ಚುಗಳೆಲ್ಲ ಅಭ್ಯರ್ಥಿಯು ಇದೇ ಉದ್ದೇಶಕ್ಕಾಗಿ ತೆಗೆದಿರುವ ಖಾತೆಯಿಂದ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.

ಮಾದರಿ ನೀತಿ ಸಂಹಿತೆ ಹಾಗೂ ಮುದ್ರಣಾಲಯಗಳು ಎಚ್ಚರ ವಹಿಸಬೇಕಾದ ಅಂಶಗಳ ಕುರಿತು ಮಾಹಿತಿ ಪ್ರತಿ ಮತ್ತು ಪ್ರತಿದಿನ ಮುದ್ರಣಾಲಯಗಳು ವರದಿ ಸಲ್ಲಿಸಬೇಕಾದ ನಮೂನೆ “ಎ’ ಮತ್ತು “ಬಿ ಪ್ರತಿಗಳನ್ನು ಸಭೆಯಲ್ಲಿ ನೀಡಲಾಯಿತು.

Advertisement

ಪ್ರಚಾರ ಸಾಮಗ್ರಿಯಲ್ಲಿ ಮುದ್ರಿಸುವ ವಿಷಯವು ಮಾದರಿ ನೀತಿ ಸಂಹಿತೆ ಉಲ್ಲಂಘಿಸುವುದಿಲ್ಲ ಎಂಬುದನ್ನು ಸ್ವತಃ ದೃಢೀಕರಿಸಿಕೊಳ್ಳಬೇಕು. ಯಾವುದೇ ಧರ್ಮ, ಜಾತಿ, ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಮತ್ತು ವೈಷಮ್ಯ ಉಂಟು ಮಾಡುವ ವಿಷಯ ಮುದ್ರಿಸಬಾರದು. ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ಅಂತಹ ಮುದ್ರಣಾಲಯ ಸೀಜ್‌ ಮಾಡಲಾಗುವುದು.
ದೀಪಾ ಚೋಳನ್‌, ಜಿಲ್ಲಾಧಿಕಾರಿ

ಮುದ್ರಣಾಲಯಗಳ ಮಾಲೀಕರು ಚುನಾವಣಾ ಪ್ರಚಾರ ಸಾಮಗ್ರಿಗಳ ಹೆಚ್ಚು ಪ್ರತಿ ಮುದ್ರಿಸಿ ಕಡಿಮೆ ತೋರಿಸುವ, ಬೇರೆಯವರ ಹೆಸರಿನಿಂದ ಮುದ್ರಿಸುವ ಅಥವಾ ಮರು ಮುದ್ರಿಸುವ ಕಾರ್ಯಕ್ಕೆ ಕೈಹಾಕಬಾರದು. ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಜಾಗೃತದಳ, ಸಮಿತಿ ರಚಿಸಿರುವುದರಿಂದ ಪ್ರತಿದಿನ ಅವಲೋಕನ ನಡೆಯುತ್ತದೆ.
ಸುರೇಶ್‌ ಇಟ್ನಾಳ, ಅಪರ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next