Advertisement

ಜಾರ್ಖಂಡ್‌: ನ್ಯಾಯಾಧೀಶರನ್ನು ಕೊಂದಿದ್ದವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಸಿಬಿಐ ಕೋರ್ಟ್

07:23 PM Aug 06, 2022 | Team Udayavani |

ರಾಂಚಿ: ಜಾರ್ಖಂಡ್‌ನ‌ ಧನ್ಬಾದ್ ನಗರದಲ್ಲಿ ಕಳೆದ ವರ್ಷ ನ್ಯಾಯಾಧೀಶ ಉತ್ತಮ್‌ ಆನಂದ್‌ ಅವರಿಗೆ ಅಪಘಾತ ಮಾಡಿ, ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ, ಜಾರ್ಖಂಡ್‌ನ‌ ಸಿಬಿಐ ನ್ಯಾಯಾಲಯವು ಅಪರಾಧಿಗಳಿಗೆ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

Advertisement

ಹಾಗೆಯೇ ಅಪರಾಧಿಗಳಾಗಿರುವ ರಾಹುಲ್‌ ವರ್ಮಾ ಮತ್ತು ಲಖನ್‌ ವರ್ಮಾಗೆ 25,000 ರೂ.ಗಳ ದಂಡವನ್ನೂ ವಿಧಿಸಲಾಗಿದೆ.

ಜು.28ರಂದು ಬೆಳಗ್ಗೆ ವಾಕಿಂಗ್‌ ಮಾಡುತ್ತಿದ್ದ ನ್ಯಾ.ಉತ್ತಮ್‌ ಅವರ ಮೇಲೆ ಲಖನ್‌ ಆಟೋ ಹರಿಸಿದ್ದ. ಆತನಿಗೆ ರಾಹುಲ್‌ ಕೂಡ ಸಾಥ್‌ ಕೊಟ್ಟಿದ್ದ. ಮೊದಲಿಗೆ ರಾಜ್ಯದ ವಿಶೇಷ ತನಿಖಾ ತಂಡವು ಪ್ರಕರಣದ ತನಿಖೆ ನಡೆಸಿದ್ದು, ನಂತರ ಅದನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು.

ಈ ವರ್ಷ ಜು.28ರಂದು ಆರೋಪಿಗಳನ್ನು ದೋಷಿಗಳೆಂದು ನ್ಯಾಯಾಲಯ ಘೋಷಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next