Advertisement
ಪಟ್ಟಣದಲ್ಲಿ ಹಲವು ವಾರ್ಡ್ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಪಡಿಸುತ್ತಿರುವವರ ಬಗ್ಗೆ ತಾಲೂಕಿನ ಜನತೆಗೆ ಗೊತ್ತಿದೆ. ತಾಲೂಕಿನಲ್ಲಿ ಶಾಶ್ವತ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಿದವರನ್ನು ಜನತೆ ಎಂದಿಗೂ ಮರೆಯೋದಿಲ್ಲ ಎಂದರು.
Related Articles
Advertisement
ಕಾಂಗ್ರೆಸ್ ಸರ್ಕಾರ ಆಡಳಿತವಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಕುಡಿಯುವ ನೀರಿನ ಯೋಜನೆಗೆ ಹೋರಾಟ ಮಾಡಿದ್ದು ಯಾರೆಂಬುದು ಜನರಿಗೆ ಗೊತ್ತಿದೆ ಎಂದರು. ಚುನಾವಣೆ ಸಮಯದಲ್ಲಿ ಕಾಣಿಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುವ ಮಾಜಿ ಶಾಸಕರ ಬಗ್ಗೆ ಜನತೆಗೆ ಗೊತ್ತು, ಮುಂದಿನ ಚುನಾವಣೆಯಲ್ಲಿ ಅವರಿಗೆ ಜನರೆ ಬುದ್ಧಿ ಕಲಿಸುತ್ತಾರೆ ಎಂದು ಭವಿಷ್ಯ ನುಡಿದರು.
ಪುರಸಭೆ ಅಧ್ಯಕ್ಷೆ ಧನಲಕ್ಷ್ಮೀ, ಉಪಾಧ್ಯಕ್ಷ ಶಶಿಕಲಾ, ಸದಸ್ಯರಾದ ಸುದೇಶ್ ಬಾಬು, ರಾಜೇಶ್, ಟೆಂಕಾಯಲ ರವಿ, ಮಹಮ್ಮದ್ ಇಮ್ರಾನ್, ನಾಗಭೂಷಣರೆಡ್ಡಿ, ವಿಜಯ ಕುಮಾರ್, ಮಣಿ, ರಾಮಾಂಜಿನಪ್ಪ, ವೆಂಕಟರಮಣಪ್ಪ, ಮಾಲಿನ್ ತಾಜ್, ಜಾಹ್ನವಿ, ಸುಧಾಲಕ್ಷ್ಮೀ, ಮಾಜಿ ಅಧ್ಯಕ್ಷರಾದ ವೇಲುರಾಜು, ಶಂಕರ್ರೆಡ್ಡಿ, ಗುರ್ರಪ್ಪ, ಮುಖಂಡರಾದ ಪ್ರಮೋದ್ ಕುಮಾರ್ ಮಾತನಾಡಿದರು. ಮುಖಂಡರಾದ ನಾನಿ ವೆಂಕಟಮ್ಮನಹಳ್ಳಿ, ಕೋಳಿ ಬಾಲಾಜಿ, ಹನುಮಂತರಾಯ, ವಿಶ್ವನಾಥ್, ಫಜುಲುಲ್ಲಾ ಸಾಬ್, ಅಭಿ, ಕಿರಣ್, ಶ್ರೀನಿವಾಸ್, ಹನುಮೇಶ್, ಪಾಪಣ್ಣ, ಮಂಜುನಾಥ್, ಅಲಿ, ವೀಣಾ ಅಂಜನ್ ಕುಮಾರ್, ಸುಮಾ ಅನಿಲ್ ಸೇರಿದಂತೆ ಮತ್ತಿತರರು ಹಾಜರಿದ್ದರು.