Advertisement

ಬ್ರಾಹ್ಮಣ ಸಂಘದ ಅಭಿವೃದ್ಧಿಗೆ ಮುಂದಾಗಿ

03:36 PM Dec 02, 2021 | Team Udayavani |

 ಶೃಂಗೇರಿ: ಬ್ರಾಹ್ಮಣ ಮಹಾಸಭೆಯಲ್ಲಿ ಬದಲಾವಣೆಗೆ ಪರ್ವ ಕಾಲವಾಗಿದೆ. ಬ್ರಾಹ್ಮಣರ ಮೇಲಿನ ಗೌರವ ಕುಸಿಯುತ್ತಿದೆ ಎಂದು ರಾಜ್ಯ ಬ್ರಾಹ್ಮಣ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಹೇಳಿದರು. ಪಟ್ಟಣದಲ್ಲಿ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಬ್ಯಾಂಕ್‌ ಮುಳುಗಡೆಗೆ ಕಾರಣರಾದವರ ಕೈಯಲ್ಲಿ ಮಹಾಸಭೆ ನಲುಗುತ್ತಿದ್ದು, ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದ 27 ಜನರು ಆತ್ಮಹತ್ಯೆ ಮಾಡಿಕೊಂಡಿದ್ದ ಅವರ ಜೀವಕ್ಕೆ ಬೆಲೆ ಇಲ್ಲವೇ. ಇಂತಹವರ ಕೈಯಲ್ಲಿ ಮಹಾಸಭಾ ಉಳಿಯುತ್ತದೆಯೇ. ಯಾವುದೇ ಸಂಘಟನೆ ಇರಲಿ ಉತ್ತಮ ನಾಯಕತ್ವದ ಅಗತ್ಯತೆ ಇದೆ. ಸಂಘದ ಅಭಿವೃದ್ಧಿಗಾಗಿ ಹಾಗೂ ಸದಸ್ಯರ ಸಮಸ್ಯೆಗಳನ್ನು ಅರಿತು ಅದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ದುಡಿಯುವ ಮನಸ್ಥಿತಿಃ ಇರಬೇಕು ಎಂದರು.

Advertisement

ತ್ರಿಮತಸ್ಥ ಬ್ರಾಹ್ಮಣರು ಒಗ್ಗೂಡಿ ಸಮುದಾಯಕ್ಕೆ ಅನನ್ಯ ಕೊಡುಗೆ ನೀಡುತ್ತಿದ್ದು, ಸಂಸ್ಕೃತಿ, ಸಂಸ್ಕಾರದ ಉನ್ನತಿಗಾಗಿ ನಾವು ಕಾರ್ಯನಿರ್ವಹಿಸಬೇಕು. ಶೈಕ್ಷಣಿಕವಾಗಿ ಪ್ರಗತಿ ಹೊಂದಿದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಆರ್ಥಿಕ ಸಹಕಾರ, ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಬೇಕಿದೆ ಎಂದರು. ನಿವೃತ್ತ ನ್ಯಾಯಮೂರ್ತಿ ಎನ್‌. ಕುಮಾರ್‌ ಮಾತನಾಡಿ, ಬ್ರಾಹ್ಮಣ ಸಮಾಜದಲ್ಲಿ 44 ಉಪ ಪಂಗಡಗಳಿದ್ದು, 40 ಲಕ್ಷ ಬ್ರಾಹ್ಮಣ ಸದಸ್ಯರು ರಾಜ್ಯದಲ್ಲಿದ್ದಾರೆ. ಕೇವಲ 40 ಸಾವಿರ ಸದಸ್ಯರು ನೋಂದಾಯಿಸಿದ್ದು, ಇದರಲ್ಲಿ 25 ಸಾವಿರ ಬೆಂಗಳೂರಿನಲ್ಲಿದ್ದಾರೆ. ಉಳಿದ 15 ಸಾವಿರ ಸದಸ್ಯರು ರಾಜ್ಯದಲ್ಲಿದ್ದಾರೆ. ಇದು ಬ್ರಾಹ್ಮಣ ಸಂಘಟನೆಯೇ ಎಂದು ಪ್ರಶ್ನಿಸಿದರು.

ಅಭ್ಯರ್ಥಿ ಎಸ್‌. ರಘುನಾಥ್‌ ಮಾತನಾಡಿ, ಕೋವಿಡ್‌ ಮಹಾಮಾರಿ ಸಮಯದಲ್ಲಿ ಅರ್ಚಕರು, ಅಡುಗೆಯವರು, ಹಿರಿಯ ನಾಗರಿಕರು, ಇನ್ನಿತರ ಬ್ರಾಹ್ಮಣ ಕುಟುಂಬಗಳಿಗೆ ದಿನಸಿ ಕಿಟ್‌ ನೀಡಲಾಗಿದೆ. ಹಿರಿಯರು, ಉತ್ಸಾಹಿ ಯುವ ಪೀಳಿಗೆ ನಮ್ಮ ತಂಡದ ಜೊತೆ ನಿರಂತರ ಸಮುದಾಯದ ಸೇವೆಗೆ ಶ್ರಮಿಸುತ್ತಿದೆ. ಅಧ್ಯಕ್ಷನಾಗಿ ಆಯ್ಕೆ ಆದಲ್ಲಿ ಸಂಘಟನೆಗೆ ಹಾಗೂ ಅಭಿವೃದ್ಧಿಗೆ ದಿನಕ್ಕೆ ಆರು ಗಂಟೆಗಳ ಕಾಲ ಮೀಸಲಿಡಲಾಗುವುದು ಎಂದರು. ಸಭೆಯಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜಿ.ಎಂ. ಸತೀಶ್‌, ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ರವಿಕುಮಾರ್‌, ಕೂಟ ಮಹಾಜಗತ್ತಿನ ಅಧ್ಯಕ್ಷ ನಾಗರಾಜ್‌, ಶಿವಳ್ಳಿ ಬ್ರಾಹ್ಮಣ ಸಂಘದ ವಿವೇಕಾನಂದ ಸುಂಕುರ್ಡಿ ಹಾಗೂ ಹೆಬ್ಟಾರ್‌ ಬ್ರಾಹ್ಮಣ ಸಭಾದ ಶ್ರೀಧರ್‌ ಅಣ್ಣುಕೊಡಿಗೆ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next