Advertisement

ದತ್ತು ಶಾಲೆ ಪ್ರಗತಿ ಯೋಜನೆಗೆ ಸಿದ್ಧತೆ

03:35 PM Dec 24, 2020 | Suhan S |

ಕಲಬುರಗಿ: ಸರ್ಕಾರಿ ಶಾಲೆಗಳ ಅಭಿವೃದ್ಧಿ ನಿಟ್ಟಿನಲ್ಲಿ ದತ್ತು ಕಾರ್ಯಕ್ರಮದಡಿ ಜಿಲ್ಲೆಯ ಒಂಭತ್ತು ಶಾಸಕರು 27 ಶಾಲೆಗಳನ್ನು ದತ್ತು ಸ್ವೀಕರಿಸಿದ್ದಾರೆ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ತಲಾ ಮೂರು ಶಾಲೆಗಳನ್ನು ಶಾಸಕರು ದತ್ತು ಪಡೆದಿದ್ದಾರೆ. ಅಭಿವೃದ್ಧಿಗಾಗಿ ಸರ್ಕಾರಿ ಶಾಲೆಗಳು ಕಾಯುತ್ತಿವೆ.

Advertisement

ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಬಲಪಡಿಸಲು ಶಾಸಕರು ದತ್ತು ಪಡೆಯುವ ಕಾರ್ಯಕ್ರಮರೂಪಿಸಲಾಗಿದೆ. ದತ್ತು ಪಡೆಯುವ ಮೂಲಕಆಯಾ ಶಾಲೆಗಳಲ್ಲಿ ಆಗಬೇಕಾದ ಅಭಿವೃದ್ಧಿಕಾರ್ಯಗಳನ್ನು ಮಾಡಬೇಕೆಂದು ರಾಜ್ಯ ಸರ್ಕಾರಶಾಸಕರಿಗೆ ಸಲಹೆ ನೀಡಿದೆ. ಅದರಂತೆ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ಒದಗಿಸುವ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಬ್ಬ ಶಾಸಕರು ಮೂರು ಶಾಲೆಗಳನ್ನು ದತ್ತುಪಡೆದುಕೊಂಡಿದ್ದಾರೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಬಳಸಿಕೊಂಡು ದತ್ತುಗಳ ಶಾಲೆಗಳ ಪ್ರಗತಿ ಯೋಜನೆ ಸಿದ್ಧ ಪಡಿಸಲಾಗುತ್ತಿದೆ.

ಜಿಲ್ಲೆಯ ಒಂಭತ್ತು ವಿಧಾನಸಭೆ ಕ್ಷೇತ್ರಗಳ ಶಾಸಕರುತಾವು ಪ್ರತಿನಿಧಿಸುವ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಮೂರು ಶಾಲೆಗಳ ದತ್ತು ಸ್ವೀಕಾರ ಪಟ್ಟಿಗೆ ಈಗಾಗಲೇಅನುಮೋದನೆ ಸಿಕ್ಕಿದೆ. ದತ್ತು ಸ್ವೀಕರಿಸಲಾದ ಶಾಲೆಗಳ ಅಭಿವೃದ್ಧಿ ಚಟುಚಟಿಕೆಗಳ ವಿವರ ಸಂಗ್ರಹಿಸಿ, ಅದಕ್ಕೆನಿಗದಿಪಡಿಸಿರುವ ಅಂದಾಜು ವೆಚ್ಚವನ್ನು ಲೆಕ್ಕ ಹಾಕಲಾಗಿದೆ.

ಶಾಲೆಗಳ ಆಯ್ಕೆ ಹೇಗೆ?: ಶಿಕ್ಷಕರು ತಮ್ಮ ಶಾಲೆಗಳಲ್ಲಿನ ಅಭಿವೃದ್ಧಿ ಕಾರ್ಯಗಳು ಹಾಗೂ ಬೋಧನಾ ಸಲಕರಣೆಗಳ ಕೊರತೆಬಗ್ಗೆ ಮೇಲಾಧಿಕಾರಿಗಳಾದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿ, ಸರ್ಕಾರದಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ಅಲ್ಲದೇ, ಸ್ವತಃಶಿಕ್ಷಣ ಇಲಾಖೆಯೇ ಮುಖ್ಯ ಶಿಕ್ಷಕರಿಂದ ಆಗಬೇಕಾದಅಭಿವೃದ್ಧಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಹೀಗೆಕಲೆ ಹಾಕಿದ ಶಾಲೆಗಳ ಮಾಹಿತಿ ಆಧರಿಸಿ ಅಥವಾಶಾಸಕರೇ ತಮ್ಮ ಮತಕ್ಷೇತ್ರ ವ್ಯಾಪ್ತಿಯ ಮೂರು ಶಾಲೆಗಳನ್ನು ಹೆಸರಿಸಿ ಆಯ್ಕೆ ಮಾಡಿಕೊಂಡಿದ್ದಾರೆ.

ಶಾಲೆಗಳ ಕೊಠಡಿ ನಿರ್ಮಾಣ, ಚಾವಣಿ ದುರಸ್ತಿ, ಕಾಂಪೌಂಡ್‌ ನಿರ್ಮಾಣ ಮಾಡುವುದು, ಕಂಪ್ಯೂಟರ್‌ ಒದಗಿಸುವುದು, ವಿಜ್ಞಾನ ಪ್ರಯೋಗಾಲಯ,ಸಲಕರಣೆ ಕೊಡಿಸುವುದು, ಆಟದ ಮೈದಾನ ಅಭಿವೃದ್ಧಿ, ಪಾಠೊಪಕರಣ ಖರೀದಿ, ಶೌಚಾಲಯ ಮತ್ತಿತರ ಕಾಮಗಾರಿಗಳನ್ನು ಮಾಡಿಕೊಡಲು ಶಾಸಕರು ಮುಂದಾಗಿದ್ದಾರೆ.

Advertisement

ಕೆಪಿಎಸ್‌ ಶಾಲೆ ಕಡ್ಡಾಯ: ಶಾಸಕರ ದತ್ತು ಪಡೆದ ಮೂರು ಶಾಲೆಗಳಲ್ಲಿ ಒಂದು ಕರ್ನಾಟಕ ಪಬ್ಲಿಕ್‌ಶಾಲೆ (ಕೆಪಿಎಸ್‌) ಸೇರುವುದು ಕಡ್ಡಾಯವಾಗಿದೆ. ಒಂದರಿಂದ ಪದವಿ ಪೂರ್ವ ಕಾಲೇಜು ವರೆಗೆ ಒಂದೇ ಆವರಣದಲ್ಲಿ ಕೆಪಿಎಸ್‌ ಶಾಲೆ ಇರುತ್ತದೆ.ಆ ಶಾಲೆಯ ಪ್ರಾಥಮಿಕ,ಪ್ರೌಢ ಹಾಗೂ ಪೂರ್ವ ಪದವಿ ವಿಭಾಗದಲ್ಲಿ ಆಗಬೇಕಾದ ಅಭಿವೃದ್ಧಿಕಾರ್ಯಗಳನ್ನು ಶಾಸಕರು ಮಾಡಬೇಕು. ಉಳಿದ ಎರಡು ಶಾಲೆಗಳಲ್ಲಿ ಒಂದು ಪ್ರಾಥಮಿಕ ಮತ್ತು ಪ್ರೌಢ ಶಾಲೆ ಸೇರಿರುತ್ತದೆ.

ದತ್ತು ಪಡೆದು ಅಭಿವೃದ್ಧಿ ಪಡಿಸುವುದರಜೊತೆಗೆ ಮೂರ್‍ನಾಲ್ಕು ತಿಂಗಳೊಗೊಮ್ಮೆ ಶಾಸಕರು ಆ ಶಾಲೆಗಳಿಗೆ ಭೇಟಿ ಕೊಡಬೇಕು. ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಚರ್ಚಿಸಬೇಕೆಂದು ಶಾಸಕರಿಗೆ ಸರ್ಕಾರದಿಂದ ನಿರ್ದೇಶನ ನೀಡಲಾಗಿದೆ.

ಶಾಸಕರು ತಮ್ಮ ವಿಧಾನಸಭೆ ಕ್ಷೇತ್ರದ ಮೂರು ಶಾಲೆಗಳನ್ನು ಸ್ವತಃ ಆಯ್ಕೆ ಮಾಡಿಕೊಡು ದತ್ತು ಪಡೆದಿದ್ದಾರೆ. ದತ್ತು ಪಡೆದ ಶಾಲೆಗಳ ಅಭಿವೃದ್ಧಿ ಚಟುವಟಿಕೆಗಳನ್ನು ಪಟ್ಟಿ ಮಾಡಿ, ಅದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಿಯಾಯೋಜನೆ ರೂಪಿಸಿದ್ದಾರೆ. ಎಸ್‌.ಪಿ. ಬಾಡಗಂಡಿ, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ

 

ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next