Advertisement

ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಯಾಗುತ್ತಿದೆ ಪುರಾತನ ಗುಜ್ಜರಕೆರೆ

11:43 PM May 11, 2020 | Sriram |

ಮಂಗಳೂರು: ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದ ಪುರಾತನ ಕೆರೆಯಾಗಿರುವ ಗುಜ್ಜರಕೆರೆ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಿದೆ ಎಂದು ಶಾಸಕ ಡಿ. ವೇದವ್ಯಾಸ್‌ ಕಾಮತ್‌ ತಿಳಿಸಿದ್ದಾರೆ.

Advertisement

ಗುಜ್ಜರಕೆರೆ ಅಭಿವೃದ್ಧಿ ಈ ಪರಿಸರದ ಸಾರ್ವಜನಿಕರ ಬಹು ಕಾಲದ ಬೇಡಿಕೆಯಾಗಿತ್ತು. ಗುಜ್ಜರಕೆರೆ ಸಮಿತಿ, ಮಂಗಳಾದೇವಿ ದೇವಸ್ಥಾನ ಭಕ್ತ ವೃಂದ, ಹಳೆಕೋಟೆ ಮಾರಿಯಮ್ಮ ದೇವಸ್ಥಾನದ ಭಕ್ತವೃಂದವು ಈ ಕೆರೆ ಅಭಿವೃದ್ಧಿಗೆ ಬೇಡಿಕೆ ಇಟ್ಟಿತ್ತು ಎಂದಿದ್ದಾರೆ.

ಪಾಲಿಕೆ ಮೇಯರ್‌, ಪಾಲಿಕೆ ಸದಸ್ಯ ಪ್ರೇಮಾನಂದ ಶೆಟ್ಟಿ, ರೇವತಿ, ಭಾನುಮತಿ, ಸ್ಮಾರ್ಟ್‌ ಸಿಟಿ ಅಧಿಕಾರಿಗಳು, ಸ್ಥಳೀಯರ ಜತೆ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಸುತ್ತಮುತ್ತಲಿನ ಕೆಲವು ದೇವಸ್ಥಾನ ದೇವರ ಅವಭೃಥ ಉತ್ಸವವು ಈ ಕೆರೆಯಲ್ಲಿ ನಡೆಯುತ್ತಿತ್ತು ಎನ್ನುವ ಅನೇಕ ಪುರಾವೆಗಳು ನಮಗೆ ದೊರೆಯುತ್ತವೆ. ಹಾಗಾಗಿ ಮತ್ತೆ ಕೆರೆಯನ್ನು ಅಭಿವೃದ್ಧಿಪಡಿಸಿ ದೇವರ ಅವಭೃಥ ಉತ್ಸವಕ್ಕೆ ಅನುಕೂಲವಾಗುವಂತೆ ಯೋಜನೆ ರೂಪಿಸಲು ಸ್ಥಳೀಯ ಮುಂದಾಳುಗಳಾದ ನೇಮು ಕೊಟ್ಟಾರಿ, ತಾರನಾಥ ಶೆಟ್ಟಿ, ನವನೀತ್‌ ಶೆಟ್ಟಿ, ಉಮಾನಾಥ್‌ ಶೆಟ್ಟಿಗಾರ್‌, ವೇಣುಗೋಪಾಲ ಪುತ್ರನ್‌, ಅನೇಕರು ಬೇಡಿಕೆಯಿಟ್ಟಿದ್ದರು ಎಂದರು.

ಕೆರೆಯ ಸುತ್ತ ವಾಯು ವಿಹಾರಕ್ಕೆ ವ್ಯವಸ್ಥೆ
ಕೆಲವು ವರ್ಷಗಳಿಂದ ಕೆರೆಗೆ ಈ ಪರಿಸರದ ಕೊಳಚೆ ನೀರು ಸೋರಿಕೆಯಾಗುತ್ತಿತ್ತು. ಈ ಯೋಜನೆಯಲ್ಲಿ ಅದನ್ನು ತಡೆಯಲು ವ್ಯವಸ್ಥೆ ಮಾಡಲಾಗುತ್ತದೆ. ಕೆರೆಯಲ್ಲಿ ಬೆಳೆವ ಗಿಡಗಂಟಿಗಳಿಂದ ನೀರು ಕಲುಷಿತವಾಗದಂತೆ ಔಷಧಗಳನ್ನು ಸಿಂಪಡಿಸಲಾಗುವುದು. ಕೆರೆಯ ಸುತ್ತಲೂ ವಾಯು ವಿಹಾರಕ್ಕೆ ಅನುಕೂಲವಾಗುವಂತೆ ವಿಶೇಷ ಯೋಜನೆಯನ್ನು ಕೂಡ ರೂಪಿಸಲಾಗಿದೆ. ಈಗಾಗಲೆ ಕೆರೆಯ ಹೂಳೆತ್ತುವ ಕಾರ್ಯ ಸಹಿತ ಇನ್ನಿತರ ಕೆಲಸಗಳು ಪ್ರಾರಂಭವಾಗಿದೆ. ಮಳೆಗಾಲದ ಸಂದರ್ಭ ಕಾಮಗಾರಿಯ ವೇಗ ಕುಂಠಿತವಾದರೂ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಶಾಸಕ ಕಾಮತ್‌ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next