Advertisement
ಜಿಲ್ಲೆಯ ಮೇಳಕುಂದಾ (ಬಿ) ಗ್ರಾಮದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯ, ಕಲಬುರಗಿ ಕೃಷಿ ವಿಜ್ಞಾನ ಕೇಂದ್ರ ಕೇಂದ್ರೀಯ ಒಣ ಬೇಸಾಯ ಸಂಶೋಧನಾ ಸಂಸ್ಥೆ (ಸಿ.ಆರ್.ಐ.ಡಿ.ಎ.) ಮತ್ತು ನೇಗಿಲಯೋಗಿ ರೈತ ಸಂಘ ಮೇಳಕುಂದಾ (ಬಿ) ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಹವಾಮಾನ ವೈಪರೀತ್ಯ ಸೈರಣಾ ಕೃಷಿ ಯೋಜನೆ ಅಡಿಯಲ್ಲಿ ಬಾಡಿಗೆ ಆಧಾರಿತ ಯಂತ್ರೋಪಕರಣಗಳ ಕೇಂದ್ರ ಕಟ್ಟಡ ಹಾಗೂ ಮಣ್ಣು ಆರೋಗ್ಯ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತರಿಗಾಗಿ ಈ ಸೌಲಭ್ಯವನ್ನು ಸರ್ಕಾರ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
Related Articles
ದಿನಾಂಕ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
Advertisement
ನವದೆಹಲಿ ಐಎಆರ್ಐ ವಿಶ್ರಾಂತ ನಿರ್ದೇಶಕ ಡಾ| ಎಸ್.ಎ. ಪಾಟೀಲ ಮಾತನಾಡಿ, ದೇಶದಲ್ಲಿ ಒಟ್ಟು 11 ಕೃಷಿಕೇಂದ್ರಗಳಿದ್ದರೂ ರೈತರ ಮೇಲೆ ಪ್ರಭಾವ ಬೀರಿ ನೂತನ ತಳಿ ನೀಡುವಲ್ಲಿ ಕಲಬುರಗಿ ಸಂಶೋಧನಾ ಕೇಂದ್ರ ಮೊದಲನೇ ಸ್ಥಾನದಲ್ಲಿದೆ. ಹೊಸತಳಿ, ತಂತ್ರಜ್ಞಾನ, ರಸಗೊಬ್ಬರ ಸೇರಿಸಿ ಬೆಳೆ ಬೆಳೆದಾಗ 1 ಎಕರೆಗೆ ಹೆಚ್ಚು ಇಳುವರಿ ಪಡೆದು ಹತ್ತಾರು ಲಕ್ಷ ರೂ. ಗಳ ಲಾಭ ಗಳಿಸಬಹುದು. ಆದರೆ ಬೆರಣಿಯಷ್ಟೇ ರೈತರು ಮಾತ್ರ ಇಂತಹ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಮೇಳಕುಂದಾ (ಬಿ) ಪ್ರಗತಿಪರ ರೈತರನ್ನು ಡಾ| ಶರಣಪ್ರಕಾಶ ಪಾಟೀಲ ಸನ್ಮಾನಿಸಿದರು. ಚಿಣಮಗೇರಾ ಮಹಾಂತೇಶ್ವರ ಮಠದ ಸಿದ್ದರಾಮ ಮಹಾಸ್ವಾಮೀಜಿ, ರಾಯಚೂರು ಕೃ.ವಿ.ವಿ ಆಡಳಿತ ಮಂಡಳಿ
ಸದಸ್ಯ ವೀರನಗೌಡ ಪರಸರೆಡ್ಡಿ, ಕಲಬುರಗಿ ಕೃಷಿಕ ಸಮಾಜ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ, ಜಿಪಂ ಸದಸ್ಯ ಸಂತೋಷ ಪಾಟೀಲ ದಣ್ಣೂರು, ರಾಯಚೂರು ಕೃ.ವಿ.ವಿ ವಿಸ್ತರಣಾ ನಿರ್ದೇಶಕ ಡಾ| ಎಸ್.ಕೆ. ಮೇಟಿ, ಕಲಬುರಗಿ ಕೃಷಿ ಮಹಾವಿದ್ಯಾಲಯ ಡೀನ್ ಡಾ| ಜೆ.ಆರ್. ಪಾಟೀಲ, ಮೇಳಕುಂದಾ (ಬಿ) ನೇಗಿಲ ಯೋಗಿ ರೈತ ಸಂಘ ಅಧ್ಯಕ್ಷ ಮಲ್ಲಿನಾಥ ಕೊಳ್ಳೂರ, ಕಲಬುರಗಿ ಕೃವಿ ಕೇಂದ್ರದ ಮುಖ್ಯಸ್ಥ ಡಾ| ರಾಜು ಜಿ. ತೆಗ್ಗಳ್ಳಿ ಇದ್ದರು. ಕೃಷಿ ಸಂಶೋಧಕ ಮುನಿಸ್ವಾಮಿ ನಿರೂಪಿಸಿದರು.