Advertisement

ಸಾಹಿತ್ಯ ಓದುವ ಅಭಿರುಚಿ ಬೆಳೆಸಿ: ಸ್ವಾಮೀಜಿ

02:48 PM Jun 13, 2022 | Team Udayavani |

ರಬಕವಿ-ಬನಹಟ್ಟಿ: ಒಳ್ಳೆಯ ಪುಸ್ತಕಗಳು ಮನುಷ್ಯನನ್ನು ಬದಲಾವಣೆ ಮಾಡುವ ಶಕ್ತಿ ಹೊಂದಿವೆ. ಇಂದು ಟ್ರ್ಯಾಕ್ಟರ್‌ ಸಾಹಿತ್ಯ ಯುವಕರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ ಹಾಗೂ ರಾಜ್ಯ ಘಟಕದವರು ಅಶ್ಲೀಲ ಹಾಡುಗಳನ್ನು ರಿಕಾರ್ಡ್‌ ಮಾಡುವ ಸ್ಟುಡಿಯೋಗಳ ವಿರುದ್ಧ ಧ್ವನಿ ಎತ್ತಬೇಕು. ಯುವಕರಿಗೆ ಮಾರ್ಗದರ್ಶನ ಮಾಡುವ ಒಳ್ಳೆಯ ಪುಸ್ತಕಗಳು ಓದುವ ಅಭಿರುಚಿ ಬೆಳೆಸುವಂತಿರಬೇಕು ಎಂದು ಚಿಮ್ಮಡ ವಿರಕ್ತಮಠದ ಶ್ರೀ ಪ್ರಭು ಸ್ವಾಮೀಜಿ ಹೇಳಿದರು.

Advertisement

ಚಿಮ್ಮಡ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಲಿಂಗೈಕ್ಯ ಶ್ರೀ ಪರಯ್ಯ ತೆಳಗಿನಮನಿ ಹಾಗೂ ಶ್ರೀಮತಿ ಭಾಗೀರಥಿ ತೆಳಗಿನಮನಿ ಸ್ಮರಣಾರ್ಥ ದತ್ತಿನಿಧಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ, ಪ್ರತಿ ತಿಂಗಳ ಪುಸ್ತಕಾವಲೋಕನದಲ್ಲಿ ನಮ್ಮ ಭಾಗದ ಸಾಹಿತ್ಯಕ್ಕೂ ಆದ್ಯತೆ ಇರಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ದತ್ತಿ ದಾನಿಗಳಾದ ಮಗಯ್ಯ ಸ್ವಾಮಿಗಳು ತೆಳಗಿನಮನಿ, ಸಾಹಿತ್ಯದಿಂದ ಮನುಷ್ಯನ ಬುದ್ಧಿ ವಿಕಾಸವಾಗುತ್ತದೆ. ಜನಪದ ಸಾಹಿತ್ಯ ಮನಸ್ಸಿಗೆ ಉಲ್ಲಾಸ ನೀಡುತ್ತದೆ ಎಂದು ಹೇಳಿದರು.

ಜನಪದ ಗೀತೆಗಳನ್ನು ಹಾಡಿ ರಂಜಿಸಿದರು. ಚಿಮ್ಮಡ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶರಶ್ಚಂದ್ರ ಜಂಬಗಿ ಅವರು ದತ್ತಿನಿಧಿ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ರಬಕವಿ-ಬನಹಟ್ಟಿ ತಾಲೂಕು ಕಸಾಪ ನಿರಂತರ ಕಾರ್ಯಕ್ರಮ ಆಯೋಜಿಸಿ ಕ್ರಿಯಾಶೀಲ ಪರಿಷತ್ತನ್ನಾಗಿ ಮಾಡುವಲ್ಲಿ ಶ್ರಮಿಸುತ್ತಿದೆ. ಜಾನಪದ ರತ್ನ, ಕವಿ ದಿ| ಅಪ್ಪಣ್ಣಪ್ಪ ಜಂಬಗಿ ದತ್ತಿನಿಧಿ ಕಾರ್ಯಕ್ರಮದಲ್ಲಿ ಜಾನಪದ ರಸೋತ್ಸವ ಆಯೋಜಿಸಲಾಗುವುದು ಎಂದರು.

ಎಸ್‌ಎಸ್‌ಎಲ್‌ಸಿಯಲ್ಲಿ ಗಮನಾರ್ಹ ಸಾಧನೆಗೈದ ಅಮೃತಾ ಜಾಡಗೌಡರ ಪಿಯುಸಿಯಲ್ಲಿ ಗಮನಾರ್ಹ ಸಾಧನೆಗೈದ ಭಾಗ್ಯಶ್ರೀ ತೆಳಗಿನಮನಿ, ಮಂಜುನಾಥ ಕರಡಿ ಅವರನ್ನು ಸನ್ಮಾನಿಸಲಾಯಿತು.

Advertisement

ಮಹಾಲಿಂಗಪುರ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಇಲಾಹಿ ಜಮಖಂಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ಚಿಮ್ಮಡ ಗ್ರಾಮದ ಗಣ್ಯರಾದ ಎಸ್‌ .ಎ. ಪಾಟೀಲ, ಮಹಾಲಿಂಗಪುರ ಕಸಾಪ ಅಧ್ಯಕ್ಷ ಬಸವರಾಜ ಮೇಟಿ ವೇದಿಕೆಯಲ್ಲಿದ್ದರು.

ರಬಕವಿ-ಬನಹಟ್ಟಿ ತಾಲೂಕು ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಸಾಪ ಕಾರ್ಯಗಳ ಯಶಸ್ವಿಗೆ ಪೂಜ್ಯರ, ಹಿರಿಯ ಸಾಹಿತಿಗಳ, ಮಾರ್ಗದರ್ಶನ ಪಡೆಯಲಾಗುತ್ತಿದೆ ಎಂದರು.

ದತ್ತಿನಿಧಿ, ಸಾಹಿತ್ಯ ಸಮ್ಮೇಳನ, ಪುಸ್ತಕ ಅವಲೋಕನ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಗ್ರಾಮೀಣ ಭಾಗದಲ್ಲಿಯೂ ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಕಾಡಪ್ಪ ಬೀಳಗಿ ಪ್ರಾರ್ಥಿಸಿದರು. ತೇರದಾಳ ವಲಯ ಕಸಾಪ ಅಧ್ಯಕ್ಷ ಗಂಗಾಧರ ಮೋಪಗಾರ ಸ್ವಾಗತಿಸಿದರು. ಕೆ.ಎಸ್‌. ರಂಗಸ್ವಾಮಿ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿಗಳಾದ ಮಹೇಶ ಮನ್ನಯ್ಯನವರ ಮಠ ವಂದಿಸಿದರು.

ಚಿಮ್ಮಡ ಗ್ರಾಮದ ಗಣ್ಯರಾದ ಪಿ.ಆರ್‌. ಪಾಲಭಾವಿ, ಹಿರಿಯ ಸಾಹಿತಿಗಳಾದ ಜಿ.ಎಸ್‌. ವಡಗಾವಿ, ಎಸ್‌. ಆರ್‌ ರಾವಳ, ಸದಾಶಿವ ದೊಡ್ಡಪ್ಪಗೋಳ, ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ದಾಕ್ಷಯಣಿ ಮಂಡಿ, ಎಸ್‌.ಎಂ. ಅಣ್ಣಿಗೇರಿ, ಶಂಕರ ಶಿರೋಳ, ಶ್ರೀಕಾಂತ ಚಿಂಚಖಂಡಿ, ಹನಿಫ್‌ ಚಿಕ್ಕೋಡಿ, ಬಸವಪ್ರಭು ತೆಳಗಿನಮನಿ ಇನ್ನಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next