Advertisement

ಪ್ರಧಾನಿ ಮೋದಿ ನೀಡಿರುವ ಕರೆಗೆ ದೇವೇಗೌಡ ಸ್ವಾಗತ

10:26 PM Apr 04, 2020 | Sriram |

ಬೆಂಗಳೂರು: ಹಿನ್ನೆಲೆಯಲ್ಲಿ ರವಿವಾರ ರಾತ್ರಿ ಮನೆಯ ವಿದ್ಯುತ್‌ ದೀಪಗಳನ್ನು ಆರಿಸಿ ದೀಪ ಅಥವಾ ಮೊಂಬತ್ತಿ ಬೆಳಗುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಯನ್ನು ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡ ಸ್ವಾಗತಿಸಿದ್ದಾರೆ.

Advertisement

ಟ್ವೀಟ್‌ ಮಾಡಿರುವ ಅವರು, ಕೋವಿಡ್ 19 ಸಂಕಷ್ಟದಿಂದ ಬಡ ಜನತೆ ಸಾಕಷ್ಟು ತೊಂದರೆ ಅನು ಭವಿಸುತ್ತಿದ್ದಾರೆ. ಅವರಲ್ಲಿ ಹೊಸ ಬೆಳಕು ಮೂಡಿಸಿ ಕೋವಿಡ್ 19 ಅಂಧಕಾರ ತೊಲಗಿಸಲು ರವಿವಾರ ರಾತ್ರಿ 9 ಗಂಟೆಗೆ ಭಾರತೀಯರೆಲ್ಲರು ಮೊಂಬತ್ತಿ, ಮೊಬೈಲ್‌, ಟಾರ್ಚ್‌, ದೀಪ ಬೆಳಗಿಸಲು ಕರೆ ನೀಡಿರುವುದು ಒಳ್ಳೆಯದು ಎಂದಿದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ರೈತರು, ಕಾರ್ಮಿಕರ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next