Advertisement

ಪ್ರತಾಪ್‌ ಸಿಂಹ ಅಪ್ಪನಿಗೆ ಹುಟ್ಟಿದ್ರೆ ಬಂದು ಮುಟ್ಟಲಿ;ದೇವಯ್ಯ ಸವಾಲು 

02:49 PM Sep 15, 2018 | |

ಮಡಿಕೇರಿ : ಅವನು ಅಪ್ಪನಿಗೆ ಹುಟ್ಟಿದ್ದರೆ ಬಂದು ಮಟ್ಟಲಿ ನೋಡೋಣ. ಆ ಮೇಲೆ ನಾನ್ಯಾರು, ಕೊಡಗಿನ ಜನ ಯಾರು ಎಂದು ತೋರಿಸುತ್ತೇನೆ…ಇದು ಹಿರಿಯ ಬಿಜೆಪಿ ಕಾರ್ಯಕರ್ತ ಎಂ.ಬಿ.ದೇವಯ್ಯ ಅವರು ಸಂಸದ ಪ್ರತಾಪ್‌ ಸಿಂಹ ಅವರಿಗೆ ಶನಿವಾರ ಹಾಕಿದ ಸವಾಲು. 

Advertisement

ಮಡಿಕೇರಿಯ ಹೆಬ್ಬಟ್ಟಗೇರಿಯಲ್ಲಿ ಕೇಂದ್ರ ತಂಡಕ್ಕೆ ಭೂ ಪರಿವರ್ತನೆಯ ಬಗ್ಗೆ ಮಾಹಿತಿ ನೀಡುವ ವಿಚಾರದಲ್ಲಿ  68 ರ ಹರೆಯದ ದೇವಯ್ಯ ಅವರು ಪ್ರತಾಪ್‌ ಸಿಂಹ ಅವರಿಗೆ ನೂರಾರು ಜನರ ಮುಂದೆಯೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ನಿಮ್ಮನ್ನು ಸಂಸದರನ್ನಾಗಿ ಆಯ್ಕೆ ಮಾಡಿದ್ದೇ ತಪ್ಪು ಎಂದಿದ್ದರು. ಆ ಬಳಿಕ ಪ್ರತಾಪ್‌ ಸಿಂಹ ಫೇಸ್‌ಬುಕ್‌ ಲೈವ್‌ನಲ್ಲಿ ಸ್ಪಷ್ಟನೆ ನೀಡುವ ವೇಳೆ ತದುಕಬೇಕು ಅನ್ನಿಸಿತ್ತು ಎಂದಿದ್ದರು. 

ಇದೀಗ ಮತ್ತೆ ದೇವಯ್ಯ ಅವರು ಕೆರಳಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ತದುಕಿಸಿಕೊಳ್ಳುವಷ್ಟು ಮುಟ್ಟಾಳ ನಾನಲ್ಲ. ನಾನು ಗಾಂಧಿ ವಾದಿಯಲ್ಲ , ನಾನು ಸುಭಾಷ್‌ ಚಂದ್ರ ಬೋಸ್‌ , ಚಂದ್ರಶೇಖರ್‌ ಅಜಾದ್‌ ಅವರ ವರ್ಗಕ್ಕೆ ಸೇರಿದವನು. ಹೊಡೆವನಿಗೆ ಇನ್ನೊಂದು ಕೆನ್ನೆ ತೋರಿಸುವುದಿಲ್ಲ. ತಾಕತ್‌ ಇದ್ದರೆ ಬಂದು ಮುಟ್ಟಿ ನೋಡಲಿ. ಆವಾಗ ದೇವಯ್ಯ ಯಾರು, ಕೊಡಗಿನ ಜನ ಯಾರು ಎನ್ನುವುದನ್ನು ತೋರಿಸುತ್ತೇನೆ. ಅವನು ಅಪ್ಪನಿಗೆ ಹುಟ್ಟಿದ ಮಗ ಆದರೆ ನನ್ನನ್ನು ಬಂದು ಎದುರಿಸಲಿ ಎಂದು ಸವಾಲು ಹಾಕಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next