Advertisement

ದೇವರದಾಸಿಮಯ್ಯ ಹಟಗಾರ ಜಗದ್ಗುರುಗಳ ಸಂಭ್ರಮದ ಪುರಪ್ರವೇಶ

07:22 PM Feb 01, 2023 | Team Udayavani |

ರಬಕವಿ-ಬನಹಟ್ಟಿ: ಜೈ ಹಟಗಾರ ಜೈ ಜೈ ಹಟಗಾರ, ಚಿಕ್ಕರೇವಣಸಿದ್ಧ ಮಹಾರಾಜಕೀ ಜೈ, ದೇವರ ದಾಸಿಮಯ್ಯ ಮಹಾರಾಜಕೀ ಜೈ ಎಂಬ ಜಯಘೋಷಣೆಗಳ ಮಧ್ಯದಲ್ಲಿ ದೇವರದಾಸಿಮಯ್ಯ ಹಟಗಾರ ಜಗದ್ಗುರು ಪರಮಪೂಜ್ಯ ಚಿಕ್ಕರೇವಣಸಿದ್ಧ ಶಿವಶರಣರ ಪೀಠಾರೋಹಣ ಅಂಗವಾಗಿ ನೂತನ ಜಗದ್ಗುರುಗಳ ಪುರಪ್ರವೇಶ ಬುಧವಾರ ಸಂಭ್ರಮ ಸಡಗರದಿಂದ ನಡೆಯಿತು.

Advertisement

ಬೆಳಗ್ಗೆ 9.30 ಕ್ಕೆ ಕೆಎಚ್‌ಡಿಸಿ ಕಾಲೊನಿಯ ದೇವರ ದಾಸಿಮಯ್ಯ ದೇವಸ್ಥಾನದಿಂದ ಆರಂಭಗೊಂಡ ಪುರಪ್ರವೇಶದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಧ್ಯಾಹ್ನ 2 ಕ್ಕೆ ಎಸ್‌ಆರ್‌ಎ ಮೈದಾನದಲ್ಲಿ ಮುಕ್ತಾಯಗೊಂಡಿತು.

ಮೆರವಣಿಗೆ ಸಂಚರಿಸುವ ಬೀದಿಯು ರಂಗೋಲಿಯಿಂದ ಕಂಗೊಳಿಸುತ್ತಿತ್ತು. ಜಗದ್ಗುರುಗಳ ರಥಕ್ಕೆ ರಸ್ತೆಯ ಬದಿಗೆ ನಿಂತ ಭಕ್ತರು ಹೂಮಳೆ ಗೈದರು.

ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಆರತಿ ಮತ್ತು ಕುಂಭವನ್ನು ಹೊತ್ತುಕೊಂಡು ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತ ಮೆರವಣಿಗೆಯಲ್ಲಿ ಸಾಗಿದರು.ಡೊಳ್ಳು ಕುಣಿತ, ಹಳಗೆ ಮೇಳ, ಗೊಂಬೆ ಕುಣಿತ, ಕರಡಿ ಮಜಲು, ಹಾಗೂ ಇನ್ನೀತರ ವಾದ್ಯ ಮೇಳಗಳು ಮೆರವಣಿಗೆಗೆ ಸಾಕಷ್ಟು ಮೆರಗನ್ನು ತಂದವು.

ಇಂಚಲದ ಶಿವಾನಂದ ಭಾರತ ಸ್ವಾಮೀಜಿ, ಆಳಂದದ ರೇವಣಸಿದ್ಧ ಶಿವಶರಣ ಮಂಟಪದ ಚನ್ನಬಸವ ಪಟ್ಟದದೇವರು, ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರರು, ಹಿರೇಮಠದ ಶರಣಬಸವ ಶಿವಾಚಾರ್ಯರು, ಮಹಾಲಿಂಗಪುರದ ಸಹಜಾನಂದ ಸ್ವಾಮೀಜಿ ಮತ್ತು ಶಾಸಕ ಸಿದ್ದ ಸವದಿ ಮೆರವಣಿಗೆಗೆ ಚಾಲನೆ ನೀಡಿದರು.

Advertisement

ಪೀಠಾರೋಹಣದ ಗೌರವಾಧ್ಯಕ್ಷ ಡಾ.ಎಂ.ಎಸ್.ದಡ್ಡೆನ್ನವರ ಮಾತನಾಡಿ, ಹಟಗಾರು ಜಗದ್ಗುರುಗಳ ಪೀಠ ಸ್ಥಾಪನೆ ಮತ್ತು ಜಗದ್ಗುರುಗಳ ನೇಮಕ ಹೋರಾಟ ಎರಡು ದಶಕಗಳ ಕಾಲದಿಂದ ನಡೆದಿತ್ತು. ಹಟಗಾರರ ಜಗದ್ಗುರುಗಳ ಪೀಠ ಸ್ಥಾಪನೆಯಿಂದಾಗಿ ಹಟಗಾರರು ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಿದೆ ಮತ್ತ ಸಮಾಜಕ್ಕೆ ಬಲ ಬಂದಂತಾಗಿದೆ.

ಪೀಠ ಸ್ಥಾಪನೆಯಿಂದ ಯುವಕರಿಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮಾರ್ಗದರ್ಶನ ಮಾಡಲು ಸಹಾಯವಾಗಿದೆ. ಯುವಕರು ಗುರು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಹಟಗಾರ ಸಮಾಜವನ್ನು ಬೆಳೆಸುವ ನಿಟ್ಟಿನಲ್ಲಿ ಸೂಕ್ತ ಚಿಂತನೆಗಳನ್ನು ಮಾಡಬೇಕು. ಹಟಗಾರ ಜಗದ್ಗುರುಗಳ ಪೀಠಾರೋಹಣಕ್ಕೆ ಅಪಾರ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಆಗಮಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.- ಡಾ.ಎಂ.ಎಸ್.ದಡ್ಡೆನ್ನವರ, ಪೀಠಾರೋಹಣದ ಗೌರವಾಧ್ಯಕ್ಷ

ರಾಜಶೇಖರ ಸೋರಗಾವಿ, ಶ್ರೀಶೈಲ ಧಬಾಡಿ, ಸೋಮು ಗೊಂಬಿ, ಆರ್.ಸಿ.ಘಾಳಿ, ಶ್ರೀಪಾದ ಬಾಣಕಾರ, ಶಂಕರ ಜಾಲಿಗಿಡದ, ಮಲ್ಲಿಕಾರ್ಜುನ ಬಾಣಕಾರ, ರಾಜಶೇಖರ ಮಾಲಾಪುರ, ಶ್ರೀಶೈಲ ಬೀಳಗಿ, ರಾಜು ಅಂಬಲಿ, ಚಂದ್ರಶೇಖರ ಶಿವಪೂಜಿ, ಡಾ.ಪಿ.ವಿ. ಪಟ್ಟಣ, ಎಂ.ಜಿ.ಕೆರೂರ, ಪಂಡಿತ ಪಟ್ಟಣ, ರಾಜೇಂದ್ರ ಭದ್ರನವರ, ಪ್ರಕಾಶ ಮಂಡಿ, ಬಸವರಾಜ ಜಾಡಗೌಡ, ಶಾಂತಾ ಸೋರಗಾವಿ, ಶಾಂತಾ ಮಂಡಿ, ಮಾಲಾ ಬಾವಲತ್ತಿ, ಹೇಮಲತಾ ಪಟ್ಟಣ ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ನೆರೆಯ ಮಹಾರಾಷ್ಟ್ರದಿಂದ ಆಗಮಿಸಿದ ಹಟಗಾರ ಸಮಾಜದ ಪ್ರಮುಖರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next