Advertisement

ದೇವನಹಳ್ಳಿ: ಕಾರು ಢಿಕ್ಕಿಯಾಗಿ ಬೈಕ್‌ ಸವಾರ ಸ್ಥಳದಲ್ಲಿಯೇ ಸಾವು

09:34 PM Aug 21, 2022 | Team Udayavani |

ದೇವನಹಳ್ಳಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ದೊಡ್ಡಬಳ್ಳಾಪುರ ಮಾರ್ಗದ ಜಂಕ್ಷನ್‌ನಲ್ಲಿ ಭಾನುವಾರ ಮುಂಜಾನೆ 4 ಗಂಟೆಯ ಸುಮಾರಿಗೆ ಬೈಕ್‌ ಮತ್ತು ಕಾರಿನ ನಡುವೆ ಮುಖಾ ಮುಖಿ ಢಿಕ್ಕಿಯಾಗಿದ್ದು, ಬೈಕ್‌ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

Advertisement

ಮೃತರು ರಾಜಸ್ಥಾನ ಮೂಲದ ಪ್ರಥುಲ್‌ ಶರ್ಮ (26) ಎಂದು ತಿಳಿದು ಬಂದಿದ್ದು. ಹಿಂಬದಿಯ ಸವಾರ ರಾಜ್‌ ಕುಮಾರ್ ಶಾ ಎಂಬುವವರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ದೇವನಹಳ್ಳಿಯ ಕಾರು ಚಾಲಕ ಸಹ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ ಸಾಗುತ್ತಿದ್ದಾಗ ಘಟನೆ ಸಂಭವಿಸಿದೆ. ವಿಜಯಪುರ ಸರ್ಕಲ್‌ ನಿಂದ ದೊಡ್ಡಬಳ್ಳಾಪುರ ಜಂಕ್ಷನ್‌ಗೆ ಹೋಗುವ ವೇಳೆಯಲ್ಲಿ ಕಾರು-ಬೈಕ್‌ಗಳ ನಡುವೆ ಅಪಘಾತವಾಗಿದೆ.

ಮೃತರು ಯಲಹಂಕದ ರೈಲ್ವೆ ಗಾಲಿ ಕಾರ್ಖಾನೆಯಲ್ಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು. ದೇವನಹಳ್ಳಿ ಟ್ರಾಫಿಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next